Breaking News
Home / Tag Archives: Belagavi news

Tag Archives: Belagavi news

ಬೆಳಗಾವಿಯಲ್ಲಿ ಮಹಾರಾಷ್ಟ್ರದ ಮಂತ್ರಿ ಅರೆಸ್ಟ…

ಬೆಳಗಾವಿಯಲ್ಲಿ ಮಹಾರಾಷ್ಟ್ರದ ಮಂತ್ರಿ ಅರೆಸ್ಟ… ಬೆಳಗಾವಿ – ಬೆಳಗಾವಿಯಲ್ಲಿ ಎಂಈಎಸ್ ಆಯೋಜಿಸಿದ್ದ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿದ್ದ ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ ಹೆಡ್ರಾವಕರ ಅವರನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ ಹುತಾತ್ಮ ಚೌಕ್ ಬಳಿ ಹೆಡ್ರಾವಕರ ಆಗಮಿಸುತ್ತಿದ್ದಂತೆಯೇ ಬೆಳಗಾವಿ ಮಹಾರಾಷ್ಟ್ರದ ಸಚಿವರನ್ನು ಅರೆಸ್ಟ ಮಾಡಿದ್ದಾರೆ ಮಹಾರಾಷ್ಟ್ರದ ನಾಯಕರು ಬೆಳಗಾವಿಗೆ, ಬರುತ್ತಿದ್ದಾರೆ ಎಂಬ ಮಾಹಿತಿ ಬೆಳಗಾವಿ ಪೋಲೀಸರಿಗೆ ಸಿಕ್ಕಿದ್ದು ಪೋಲೀಸರು ನಗರದಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ ಎಂಇಎಸ್ ಹುತಾತ್ಮ ದಿನಾಚರಣೆ …

Read More »

ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ರಾಣಿ ಚನ್ನಮ್ಮನ ಹೆಸರು ನಾಮಕರಣ ಮಾಡುವ ಪ್ರಕ್ರಿಯೆ ಆರಂಭ

ಬೆಳಗಾವಿ- ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವೀರ ರಾಣಿ ಕಿತ್ತೂರು ಚನ್ನಮ್ಮಾಜಿಯ ಹೆಸರು ನಾಮಕರಣ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಕೇಂದ್ರದ ರಾಜ್ಯ ರೈಲು ಸಚಿವ ಸುರೇಶ್ ಅಂಗಡಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ ,ಜಿಲ್ಲಾಧಿಕಾರಿಗಳು ಈ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸುತ್ತಾರೆ.ಈ ವಿಷಯ ಸಚಿವ ಸಂಪುಟದಲ್ಲಿ ಪಾಸ್ ಆದ ಬಳಿಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಕೇಂದ್ರ ಸಚಿವ ಸುರೇಶ ಅಂಗಡಿ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವೀರ …

Read More »

ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಬೆಳಗಾವಿಯಲ್ಲಿ ಮಾಸ್ಟರ್ ಪ್ಲ್ಯಾನ್…..!!!

ಬೆಳಗಾವಿ- ದಿನದಿಂದ ದಿನಕ್ಕೆ ಬೆಳಗಾವಿಯಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಲೇ ಇದೆ ,ವಾಹನಗಳ ಪಾರ್ಕಿಂಗ್ ಗೆ ನಿಗದಿತ ಝೋನ್ ಇಲ್ಲದೇ ಇರುವದರಿಂದ ವಾಹನ ಸವಾರರು ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕ ಮಾಡಿ ದಿನನಿತ್ಯ ಸಾವಿರಾರು ರೂ ದಂಡ ಪಾವತಿಸುವ ಪರಿಸ್ಥಿತಿ ಬೆಳಗಾವಿಯಲ್ಲಿ ಸಾಮಾನ್ಯವಾಗಿದೆ. ಬೆಳಗಾವಿ ನಗರದಲ್ಲಿ ಕಾರ್ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಲೇ ಇದೆ ಬೆಳಗಾವಿಯ ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ ,ಅಂದ್ರೆ ,ರವಿವಾರ ಪೇಟೆ,ಖಡೇಬಝಾರ್ ,ಗಣಪತಿ ಬೀದಿ,ಮಾರುತಿ ಬೀದಿ ಮತ್ತು ಸಮಾದೇವಿ …

Read More »

ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿ ಯುವಕನ ಮರ್ಡರ್…

ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿ ಮರ್ಡರ್… ಬೆಳಗಾವಿ- ನಿನ್ನೆ ರಾತ್ರಿ ಯುವಕನ ಹತ್ಯೆ ಮಾಡಿದ ಘಟನೆ ಹಳೆ ಬೆಳಗಾವಿ ನಾಕಾ ಬಳಿ ನಡೆದಿದೆ 25ವರ್ಷದ ಯುವಕ ಚಿತ್ರದುರ್ಗ ಮೂಲದ ಮಹ್ಮದ ಶಫಿ ಎಂ ಟ್ರಕ್ ಕ್ಲೀನರ್ ಎಂದು ಗುರುತಿಸಲಾಗಿದೆ. ಈತನನ್ನು ಬೇರೆ ಕಡೆ ಹತ್ಯೆ ಮಾಡಿ ಬೆಳಗಾವಿಯಲ್ಲಿ ಶವ ಎಸೆದು ಹೋಗಿದ್ದಾರೆಯೋ? ಅಥವಾ ಆತನ ಹತ್ಯೆ ಬೆಳಗಾವಿಯಲ್ಲೇ ನಡೆದಿದೆಯೋ ಅನ್ನೋದು ಗೊತ್ತಾಗಿಲ್ಲ ಶಹಾಪೂರ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸಿದ್ದಾರೆ.

Read More »

ಬೆಳಗಾವಿ ,ಅಡಿಶ್ನಲ್ ಎಸ್ ಪಿ ಯಾಗಿ ಅಮರನಾಥ ರೆಡ್ಡಿ….

ಬೆಳಗಾವಿ ,ಅಡಿಶ್ನಲ್ ಎಸ್ ಪಿ ಯಾಗಿ ಅಮರನಾಥ ರೆಡ್ಡಿ.. ಬೆಳಗಾವಿ- ಬೆಳಗಾವಿ ನಗರದಲ್ಲಿ ಸುಮಾರು ಮೂರು ವರ್ಷಗಳ ಕಾಲ ಕ್ರೈಂ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದ ಅಮರನಾಥ ರೆಡ್ಡಿ ಅವರನ್ನು ಬೆಳಗಾವಿಯ ಅಡಿಶ್ನಲ್ ಎಸ್ ಪಿ ಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ ಬೆಳಗಾವಿ ಜಿಲ್ಲಾ ಬ್ರಷ್ಟಾಚಾರ ನಿಗ್ರಹ ದಳದ (ACB) ಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಬೆಳಗಾವಿ ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿಯಾಗಿ ಅಮರನಾಥ ರೆಡ್ಡಿ …

Read More »

ಬೆಳಗಾವಿಯ ರೈಲು ನಿಲ್ದಾಣದಲ್ಲಿ ಬಾಕ್ಸನಲ್ಲಿ ಹಾಕಿ ಎರಡು ತಿಂಗಳ ಮಗು ಬಿಟ್ಟು ಹೋದ ಪೋಷಕರು..

ಬೆಳಗಾವಿಯ ರೈಲು ನಿಲ್ದಾಣದಲ್ಲಿ ಎರಡು ತಿಂಗಳ ಮಗು ಬಿಟ್ಟು ಹೋದ ಪೋಷಕರು.. ಬೆಳಗಾವಿ- ಬೆಳಗಾವಿಯ ರೈಲು ನಿಲ್ಧಾಣದಲ್ಲಿ ಇತ್ತೀಚೆಗೆ ಮಮತೆಯ ಮಡಿಲು ಎಂಬ ತೊಟ್ಟಿಲನ್ನು ರೈಲು ಮಂತ್ರಿ ಸುರೇಶ ಅಂಗಡಿ ಅವರು ಉದ್ಘಾಟನೆ ಮಾಡಿದ್ದರು ಈ ತೊಟ್ಟಿಲಿಗೆ ಈಗ ಮೊದಲನೇಯ ಮಗು ಕಾಣಿಕೆಯಾಗಿ ಬಂದಿದೆ ಹೆಣ್ಣು ಎಂಬ ಕಾರಣಕ್ಕೆ 2 ತಿಂಗಳ ಹಸುಗೂಸನ್ನು ಬಾಕ್ಸ್‌ನಲ್ಲಿ ಹಾಕಿ ಬಿಟ್ಟು ಹೋದ ಪೋಷಕರು ಬೆಳಗಾವಿ ರೈಲು ನಿಲ್ದಾಣ ಮುಂಭಾಗದ ಅಂಗಡಿ ಹತ್ತಿರ ಬಾಕ್ಸ್ …

Read More »

ನಾಳೆ ಬೆಳಗಾವಿಯಲ್ಲಿ ಬೃಹತ್ ಕನ್ನಡದ ಚಳುವಳಿ…

ಮರಾಠಿ ಸಾಹಿತ್ಯ ಸಮ್ಮೇಳನಗಳ ನೆಪದಲ್ಲಿ ಮರಾಠಿಗರಿಗೆ ಎಮ್ ಇ ಎಸ್ ಪ್ರಚೋದನೆಯ ವಿರುದ್ಧ ಸೋಮವಾರ ಬೆಳಗಾವಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟಿಸಲಿವೆ. ಬೆಳಗಾವಿ ಡಿಸಿ,ಎಸ್ಪಿ,ಪೋಲೀಸ್ಆಯುಕ್ತರಿಗೆ ಮನವಿ ಸಲ್ಲಿಸಿ ಬೆಳಗಾವಿಯಲ್ಲಿ ಎಂಈಎಸ್ ಮತ್ತು ಶಿವಸೇನೆಯ ಪುಂಡಾಟಿಕೆಗೆ ಲಗಾಮು ಹಾಕುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಿವೆ ಬೆಳಗಾವಿ ಜಿಲ್ಲೆಯ ಬೆಳಗಾವಿ,ಖಾನಾಪುರ,ನಿಪ್ಪಾಣಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ಗಡಿವಿವಾದವನ್ನು ಕೆದಕುವ,ಪ್ರಚೋದಿಸುವ ಚಟುವಟಿಕೆಗಳು ನಡೆದಿದ್ದು ಇವುಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ …

Read More »

ಸೋನಿಯಾ ,ಮಮತಾ ,ಇಮ್ರಾನ್ ಖಾನ್ ಭಾಷೆ ಆಡುತ್ತಿದ್ದಾರೆ- ಅನುರಾಗ ಠಾಖೂರ

ಬೆಳಗಾವಿ-ದೇಶದ ಕೆಲವು ರಾಜ್ಯಗಳಲ್ಲಿ ,ಕೆಲವು ಪ್ರದೇಶಗಳಲ್ಲಿ ,ಕಾಂಗ್ರೆಸ್ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಮಾಡದ ಕೆಲಸವನ್ನು ಪ್ರದಾನಿ ನರೇಂದ್ರ ಮೋದಿ ಮಾಡುತ್ತಿರುವದರಿಂದ ಕಾಂಗ್ರೆಸ್ ಪಕ್ಷಕ್ಕೆ ಇದನ್ನು ಸಹಿಸಲು ಸಾದ್ಯವಾಗುತ್ತಿಲ್ಲ ಎಂದು ಕೇಂದ್ರದ ರಾಜ್ಯ ಹಣಕಾಸು ಸಚಿವ ಅನುರಾಗ ಠಾಖೂರ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದರು ಬೆಳಗಾವಿಯ ಸರ್ದಾರ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ತಿಳುವಳಿಕೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು …

Read More »

ಬೆಳಗಾವಿಯ ಕೋಟೆಯಲ್ಲಿ ವೈಫರ್ ಹೆಬ್ಬಾವು… ಸಾರ್ವಜನಿಕರಲ್ಲಿ ಆತಂಕ

ಬೆಳಗಾವಿಯ ಕೋಟೆಯಲ್ಲಿ ವೈಫರ್ ಹೆಬ್ಬಾವು… ಸಾರ್ವಜನಿಕರಲ್ಲಿ ಆತಂಕ ಬೆಳಗಾವಿ- ಬೆಳಗಾವಿಯ ಕೋಟೆಯಲ್ಲಿ ,ಅತ್ಯಂತ ವಿಷಕಾರಿ ಮತ್ತು ಭಯಾನಕ ವೈಫರ್ ಹೆಬ್ಬಾವು ಪತ್ತೆತಾಗಿದೆ. ಕೋಟೆಯಲ್ಲಿರುವ ಸಮಾಜ ಸೇವಕ ನಿತೀನ್ ಖೋತ್ ಅವರ ಮನೆಯ ಎದುರು ವೈಫರ್ ಹೆಬ್ಬಾವು ನೋಡಿ ಜನ ಓಡಾಡಿದರು ,ಕೆಲ ಕಾಲ ಕೋಟೆಯಲ್ಲಿ ವೈಫರ್ ಹೆಬ್ಬಾವು ಆತಂಕದ ವಾತಾವರಣ ನಿರ್ಮಿಸಿತ್ತು ನಿವೃತ್ತ ಸೈನಿಕ ಚಂದ್ರಶೇಖರ ಸವಡಿ ,ವೈಫರ್ ಹೆಬ್ಬಾವು ಹಿಡಿದು ಸಿಂಟೆಕ್ಸ ಟಾಕಿಯಲ್ಲಿ ಹಾಕಿದ್ರು ನಂತರ ಈ ವೈಫರ್ …

Read More »

ಆಸ್ಪತ್ರೆಯಲ್ಲಿ ಸತ್ತವಳು,ಮನೆಯಲ್ಲಿ ಕಣ್ಣು ಬಿಟ್ಟಳು,ಅಂತ್ಯಕ್ರಿಯೆಗೆ ಬಂದವರು ಯಲ್ಲಮ್ಮಾ ದೇವಿಯ ಪವಾಡ ಅಂದ್ರು….

  ಬೆಳಗಾವಿ- ನೆತ್ತಿಗೆ ಜ್ವರ ಏರಿ ಅಸ್ವಸ್ಥಳಾದ ಮಹಿಳೆಯನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹೃದಯ ಮಿಡಿತ ಬಂದ್ ಆಗಿದೆ ಮಹಿಳೆ ಮೃತಪಟ್ಟಿದ್ದಾಳೆ ಎಂದು ಖಾಸಗಿ ಆಸ್ಪತ್ರೆಯಲ್ಲಿ ಘೋಷಣೆ ಮಾಡಿದ ನಂತರ ಶವ ವಾಗಿ ಮನೆಗೆ ಹೋದ ಮಹಿಳೆ ಮನೆಯಲ್ಲಿ ಜೀವಂತವಾದ ಅಚ್ಚರಿಯ ಘಟನೆ ಬೆಳಗಾವಿ ತಾಲ್ಲೂಕಿನ ಮುಚ್ಚಂಡಿ ಗ್ರಾಮದಲ್ಲಿ ನಡೆದಿದೆ. ಮುಚ್ಚಂಡಿ ಗ್ರಾಮದ ಸಿದ್ದೇಶ್ವರ ನಗರದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ ಮುಚ್ಚಂಡಿ ಗ್ರಾಮದ ,ಮಾಲು ಯಲ್ಲಪ್ಪ ಚೌಗಲೇ …

Read More »