Breaking News
Home / Uncategorized

Uncategorized

ನೀರಿನ ಸಮಸ್ಯೆ ಅರ್ಜಂಟ್ ಮೀಟೀಂಗ್ ಕರೆಯಲು‌ ಡಿಸಿ ಆದೇಶ..

ತಕ್ಷಣವೇ ಟಾಸ್ಕ್ ಫೋರ್ಸ್ ಸಭೆ ನಡೆಸಲು ನಿರ್ದೇಶನ ಬೆಳಗಾವಿ-ಮಳೆಗಾಲ ವಿಳಂಬವಾಗುತ್ತಿರುವುದರಿಂದ ಜಿಲ್ಲೆಯ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿರುತ್ತದೆ. ಆದ್ದರಿಂದ ಎಲ್ಲ ತಹಶೀಲ್ದಾರರು ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಭೆಯನ್ನು ನಡೆಸಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಅಗತ್ಯವಿರುವ ಅನುದಾನದ ಕುರಿತು ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು. ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ಪೂರೈಕೆಗೆ ಸಂಬಂಧಿಸಿದಂತೆ ‌ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ …

Read More »

ಬೆಳಗಾವಿಯಲ್ಲಿ ಡ್ಯಾಮೇಜ್ ಕಂಟ್ರೋಲ್ ಗೆ ಸಿಎಂ ಬೊಮ್ಮಾಯಿ ಮಾಸ್ಟರ್ ಸ್ಟ್ರೋಕ್!

ಬೆಳಗಾವಿಯಲ್ಲಿ ಛತ್ರಪತಿ ಶಿವಾಜಿ,ಧರ್ಮವೀರ ಸಂಬಾಜಿ ಮಹಾರಾಜರ ಮೂರ್ತಿಗಳ ಅನಾವರಣದ ಜೊತೆಗೆ ಸರ್ಕಾರ ಈಗ ಜಗಜ್ಯೋತಿ ಬಸವೇಶ್ವರ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ,ಜೊತೆಗೆ ವಿಶ್ವರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಮಾಡಲು ಸರ್ಕಾರ ಮುಂದಾಗಿದೆ.ಈ ವಿಚಾರದಲ್ಲಿ ಶಾಸಕ ಅಭಯ ಪಾಟೀಲ ಮುಖ್ಯಮಂತ್ರಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ರಾಜ್ಯ ವಿಧಾನಸಭೆ ಚುನಾವಣೆಗೆ ಗಡಿ‌ಜಿಲ್ಲೆ ಬೆಳಗಾವಿ ಸಜ್ಜುಗೊಳ್ಳುತ್ತಿದೆ. ಈ ಮಧ್ಯೆ‌ ಮಹಾನಾಯಕರ ಪುತ್ಥಳಿ ‌ರಾಜಕಾರಣವೂ ಭರ್ಜರಿ ಸದ್ದು ಮಾಡ್ತಿದೆ. ಮರಾಠಾ ಸಮುದಾಯದ ಓಲೈಕೆಗೆ ಪೈಪೋಟಿಗೆ ಬಿದ್ದಿದ್ದ …

Read More »

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು ಓಡಾಡುತ್ತಿದ್ದಾರೆ.ಬಿಜೆಪಿ ಟಿಕೆಟ್ ಗಾಗಿ ಬೆಳಗಾವಿಯಿಂದ ಬೆಂಗಳೂರು, ಬೆಂಗಳೂರಿನಿಂದ ದೆಹಲಿ, ದೆಹಲಿಯಿಂದ ನಾಗಪೂರದವರೆಗೆ ಪ್ರಯಾಣ ಮಾಡಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಜೊತೆ ರಾಜ್ಯ ಬಿಜೆಪಿ ಅಧ್ತಕ್ಷ ನಳೀನಕುಮಾರ್ ಕಟೀಲ್,ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು …

Read More »

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. ಚಂದ್ರಕಾಂತ ಪಾಟೀಲ ಅವರು ಮಹಾಪುರುಷರ ಕುರಿತು ಹಗುರವಾಗಿ ಮಾತನಾಡಿದ್ದನ್ನು ಖಂಡಿಸಿ, ಕಾರ್ಯಕರ್ತನೊಬ್ಬ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಕಪ್ಪು ಮಸಿ ಎರೆಚಿ ಪರಾರಿಯಾಗುತ್ತಿದ್ದಾಗ ಪೋಲೀಸ್ರು ಆತನನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರು ಬೆಳಗಾವಿ ಗಡಿವಿವಾದದ ಕುರಿತು ಬೆಳಗಾವಿಗೆ ಭೇಟಿ ನೀಡಲು ನಿರ್ಧರಿಸಿದ್ದರು. …

Read More »

ಬೆಳಗಾವಿಯ ಎಂಇಎಸ್ ಪುಂಡಾಟಿಕೆ ಮಹಾರಾಷ್ಟ್ರದ ಕೊಲ್ಹಾಪೂರಕ್ಕೆ ಶಿಪ್ಟ್…!!

ಬೆಳಗಾವಿ- ಬೆಳಗಾವಿಯ ಸುವರ್ಣವಿಧಾನಸೌಧ ದಲ್ಲಿ ಡಿಸೆಂಬರ್ 19 ರಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶ ನಡೆಯುತ್ತಿದ್ದು, ಇದನ್ನು ಸಹಿಸಲಾಗದ ನಾಡದ್ರೋಹಿ ಎಂಇಎಸ್ ನಾಯಕರು ಈಗ ತಮ್ಮ ಹೋರಾಟ,ಚೀರಾಟವನ್ನು ಮಹಾರಾಷ್ಟ್ರದ ಕೊಲ್ಹಾಪೂರಕ್ಕೆ ಶಿಪ್ಟ್ ಮಾಡಿದ್ದಾರೆ. ಇಂದು ಕೊಲ್ಹಾಪೂರದಲ್ಲಿ ಬೆಳಗಾವಿಯ ಗಡಿವಿವಾದ ಸೇರಿದಂತೆ ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು, ಶಿವಸೇನೆಯ ಠಾಕ್ರೆಬಣ, ಶರದ್ ಪವಾರ ಅವರ ರಾಷ್ಟ್ರವಾದಿ ಕಾಂಗ್ರೆಸ್ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ ಸೇರಿಕೊಂಡು ಅಸ್ತಿತ್ವಕ್ಕೆ ತಂದಿದ್ದ ಮಹಾರಾಷ್ಟ್ರ ಮಹಾ ವಿಕಾಸ ಅಘಾಡಿ ವತಿಯಿಂದ ಬೃಹತ್ತ್ …

Read More »

ವ್ಯಾಪಾರಿಯನ್ನು ಕಿಡ್ನ್ಯಾಪ್ ಮಾಡಿ, ಸುಲಿಗೆ ಮಾಡಿದ್ದ ಏಳು ಜನ ಅರೆಸ್ಟ್….

ವ್ಯಾಪಾರಿಯನ್ನು ಕಿಡ್ನ್ಯಾಪ್ ಮಾಡಿ ಸುಲಿಗೆ ಮಾಡಿದ ಏಳು ಜನ ಅರೆಸ್ಟ್…. ಬೆಳಗಾವಿ – ಕಳೆದ ವಾರ ಬೆಳಗಾವಿ ಜಿಲ್ಲೆಯ ಮುರುಗೋಡ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವ್ಯಾಪಾರಿಯನ್ನು ಕಿಡ್ನ್ಯಾಪ್ ಮಾಡಿ ಸುಲಿಗೆ ಮಾಡಿದ ಏಳು ಜನ ಆರೋಪಿಗಳನ್ನು ಮುರುಗೋಡ ಪೋಲೀಸ್ರು ಅರೆಸ್ಟ್. ಮಾಡಿದ್ದಾರೆ. ಏಳು ಜನ ಸುಲಿಗೆಕೋರರು ಕೂಡಿಕೊಂಡು ವ್ಯಾಪಾರಿಯೊಬ್ಬನನ್ನು ಅಪಹರಿಸಿ,ಆತನಿಗೆ ಬೆದರಿಸಿ ಒಂದು ಲಕ್ಷ ರೂ ಸುಲಿಗೆ ಮಾಡಿದ್ದಾರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಮುರುಗೋಡ ಠಾಣೆಯ ಪೋಲೀಸ್ರು ಏಳು …

Read More »

ಎಲ್ಲಾ ಪಕ್ಷಗಳಲ್ಲೂ ಬಣಗಳಿವೆ, ಬಣ ಬಿಟ್ಟು ರಾಜಕೀಯ ಮಾಡಾಕ್ ಆಗೋಲ್ಲ- ಸತೀಶ್ ಜಾರಕಿಹೊಳಿ

ಗುಜರಾತ್‌ ನಲ್ಲಿ ಕಾಂಗ್ರೆಸ್‌ ಸೋಲಿಗೆ ಆಪ್‌ ಕಾರಣ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಬೆಳಗಾವಿ: ಗುಜರಾತ್‌ ನಲ್ಲಿ ಕಾಂಗ್ರೆಸ್‌ ಸೋಲಿಗೆ ಆಮ್‌ ಆದ್ಮಿ ಪಕ್ಷವೇ ಕಾರಣವಾಗಿದ್ದು, ಶೇ 13% ರಷ್ಟು ಕಾಂಗ್ರೆಸ್‌ ಮತಗಳನ್ನು ಆಮ್‌ ಆದ್ಮಿ ಪಾರ್ಟಿ ಪಡೆದುಕೊಂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ನಗರದ ಜಾಧವನಗರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್‌ನಲ್ಲಿ ಇಷ್ಟು ಕಡಿಮೆ ಸ್ಥಾನ ಬರಬಹುದು ಎಂದು ನಾವು ನಿರೀಕ್ಷೆ …

Read More »

ಅಧಿವೇಶನದ ದಿನವೇ, ಬೆಳಗಾವಿಯಲ್ಲಿ ಎಂಇಎಸ್ ನಿಂದ ಮರಾಠಿ ಮೇಳಾವ್…!!

ಬೆಳಗಾವಿ- ಡಿಸೆಂಬರ್ 19 ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಅಧಿವೇಶನಕ್ಕೆ ಪ್ರತಿಯಾಗಿ ನಾಡದ್ರೋಹಿ ಎಂಇಎಸ್ ಮರಾಠಿ ಮಹಾ ಮೇಳಾವ್ ನಡೆಸಲು ನಿರ್ಧರಿಸಿದೆ. ಡಿಸೆಂಬರ್ 19 ರಂದು ಬೆಳಗಾವಿಯ ವ್ಯಾಕ್ಸೀನ್ ಡಿಪೋದಲ್ಲಿ ಮರಾಠಿ ಮೇಳಾವ್ ನಡೆಸಲು ಅನುಮತಿ ನೀಡುವಂತೆ ಎಂಇಎಸ್ ನಗರ ಪೋಲೀಸ್ ಆಯುಕ್ತರು ಮತ್ತು ಜಿಲ್ಲಾ ಅಧಿಕಾರ ಗಳಿಗೆ ಮನವಿ ಅರ್ಪಿಸಿದೆ. ಡಿಸೆಂಬರ್‌ 19 ರಂದು ಅಧಿವೇಶನದ ಮೊದಲ ದಿನವೇ ಬೆಳಗಾವಿಯಲ್ಲಿ ಮರಾಠಿ ಮೇಳಾವ್ ನಡೆಸಲು …

Read More »

ಮಗಳ ಶವವನ್ನು ಮನೆಯಲ್ಲಿಟ್ಟು ಪತ್ರಿಕೆ ಹಂಚಿದ್ದ ಮಹಾದೇವ !

ಡೆಡ್ಲಿ ಡೆರಿಂಗ್ ಡೆಡಿಕೆಶನ್ ಅಂದ್ರೆ ಇದೇನಾ ? ಕರ್ತವ್ಯ ಪ್ರಜ್ಞೆ – ಕರ್ತವ್ಯ ನಿಷ್ಠೆ* ಎಂಬುದು ಅತ್ಯಂತ ಮಹತ್ವದ್ದು ಹಾಗೂ ವ್ಯಕ್ತಿತ್ವ ವಿಕಾಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಡೆಡಿಕೆಶನ್ ಎಂಬ ಪದಕ್ಕೆ ಇದನ್ನೊಂದು ಹೆಸರು ಎನ್ನುವಂತಿದೆ ಈ ಸ್ಟೋರಿ. ಇವರು ಮಹಾದೇವ ತುರಮರಿ ವಯಸ್ಸು 70 ವರ್ಷ. ಬೆಳಗಾವಿ ಜಿಲ್ಲೆಯ *ಚೆನ್ನಮ್ಮನ‌ ಕಿತ್ತೂರಿನಲ್ಲಿ ಕಡು ಬಡತನದಲ್ಲಿ ಹುಟ್ಟಿ* ನೇಕಾರಿಗೆ ‌ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾಗ ಉದ್ಯೋಗಲ್ಲಿ ಲಾಸ್ ಆಗಿ ಭಾರಿ ತೊಂದರೆಯಲ್ಲಿದ್ದರು. …

Read More »

ಬೆಳಗಾವಿ ಜಿಲ್ಲೆಯಲ್ಲಿ ಪಂಚಮಸಾಲಿ ಸಮುದಾಯದ ಪಾವರ್…!!

ಈಗ ಬೆಳಗಾವಿ ಜಿಲ್ಲೆಯಲ್ಲಿ ಪಂಚಮಸಾಲಿ ಸಮಾಜದ ಹವಾ…!!! ಬೆಳಗಾವಿ – ಮಠಾಧೀಶರು ಸಮಾಜದ ಒಳತಿಗಾಗಿ ಸಂಕಲ್ಪ ಮಾಡಿದ್ರೆ ಏನೆಲ್ಲಾ ಮಾಡಬಹುದು ಅನ್ನೋದನ್ನು ಕೂಡಲಸಂಗಮ‌ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಾಭೀತು ಮಾಡಿ ತೋರಿಸಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ದೊರಕಿಸಿ ಕೊಡಲು ಪಂಚಮಸಾಲಿ ಶ್ರೀಗಳು ನಡೆಸಿರುವ ಹೋರಾಟ, ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲಿಕಿಸುವ ಮಟ್ಟಿಗೆ ಪ್ರಭಾವಶಾಲಿಯಾಗುತ್ತಿದೆ.ಯಾಕಂದ್ರೆ ಪಂಚಮಸಾಲಿ ಶ್ರೀಗಳಾದ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಒಂದಾದ ಮೇಲೊಂದು …

Read More »