Breaking News

ಬೆಳಗಾವಿಯಲ್ಲಿ ಬತ್ತದ ರಾಶಿಗೆ ಬೆಂಕಿ,ಎರಡು ಬಣವಿಗಳು ಭಸ್ಮ

ಬೆಳಗಾವಿ-ರಾಶಿ ಮಾಡಲು ಇಟ್ಟಿದ್ದ ಎರಡು ಬಣವಿ. ಇನ್ನೇನು ರಾಶಿ ಮಾಡಬೇಕು ಎನ್ನುವಷ್ಟರಲ್ಲಿ ತಡರಾತ್ರಿಯಲ್ಲಿ ಬೆಂಕಿಗಾಹುತಿಯಾವೆ.

ಶಿಂದೋಳ್ಳಿ ಗ್ರಾಮದ ಚಂದ್ರಗೌಡ ಬಾಬಾಗೌಡ ಪಾಟೀಲ ಇವರ ಜಮೀನ ನಲ್ಲಿ ರಾಶಿ ಮಾಡಲು ಕುಡಿಟ್ಟ ಸುಮಾರ 40 ಚೀಲ ದ ಬಾಸುಮತಿ ಭತ್ತದ ಭಣವೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಸುವರ್ಣ ಸೌಧದ ಹಿಂಬದಿಯಲ್ಲೇ ಶೆಟ್ಟಿ ರಸ್ತೆಯ ಭೀಮನ ಪಾದದ ಹತ್ತಿರ ಈ ಅವಘಡ ನಡೆದಿದೆ.

ಎರಡು ಬತ್ತದ ಬಣವಿ ಬೆಂಕಿಗೆ ಆಹುತಿಯಯಾಗಿದ್ದು,ಅಕ್ಕಪಕ್ಕದ ಗದ್ದೆಗಳಲ್ಲೂ ರಾಶಿ ಮಾಡಲು ಕೂಡಿಟ್ಟ ನೂರಾರು ಬಣವಿಗಳಿದ್ದು ಬೆಳ್ ಬೆಳಿಗ್ಗೆ ಭಸ್ಮವಾದ ಎರಡು ಬಣವಿಗಳನ್ನು ನೋಡಿದ ರೈತರು ಆತಂಕಕ್ಕೊಳಗಾಗಿದ್ದಾರೆ, ಬೆಳಗಾವಿ ತಾಲೂಕಿನ ಶಿಂಧೊಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕಿಡಗೇಡಿಗಳು ಉದ್ದೇಶಪೂರ್ವಕವಾಗಿ ಬತ್ತದ ಬಣವಿಗಳಿಗೆ ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ.

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *