Breaking News
Home / Breaking News / ಬೆಳಗಾವಿಯಲ್ಲಿ ಬತ್ತದ ರಾಶಿಗೆ ಬೆಂಕಿ,ಎರಡು ಬಣವಿಗಳು ಭಸ್ಮ

ಬೆಳಗಾವಿಯಲ್ಲಿ ಬತ್ತದ ರಾಶಿಗೆ ಬೆಂಕಿ,ಎರಡು ಬಣವಿಗಳು ಭಸ್ಮ

ಬೆಳಗಾವಿ-ರಾಶಿ ಮಾಡಲು ಇಟ್ಟಿದ್ದ ಎರಡು ಬಣವಿ. ಇನ್ನೇನು ರಾಶಿ ಮಾಡಬೇಕು ಎನ್ನುವಷ್ಟರಲ್ಲಿ ತಡರಾತ್ರಿಯಲ್ಲಿ ಬೆಂಕಿಗಾಹುತಿಯಾವೆ.

ಶಿಂದೋಳ್ಳಿ ಗ್ರಾಮದ ಚಂದ್ರಗೌಡ ಬಾಬಾಗೌಡ ಪಾಟೀಲ ಇವರ ಜಮೀನ ನಲ್ಲಿ ರಾಶಿ ಮಾಡಲು ಕುಡಿಟ್ಟ ಸುಮಾರ 40 ಚೀಲ ದ ಬಾಸುಮತಿ ಭತ್ತದ ಭಣವೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಸುವರ್ಣ ಸೌಧದ ಹಿಂಬದಿಯಲ್ಲೇ ಶೆಟ್ಟಿ ರಸ್ತೆಯ ಭೀಮನ ಪಾದದ ಹತ್ತಿರ ಈ ಅವಘಡ ನಡೆದಿದೆ.

ಎರಡು ಬತ್ತದ ಬಣವಿ ಬೆಂಕಿಗೆ ಆಹುತಿಯಯಾಗಿದ್ದು,ಅಕ್ಕಪಕ್ಕದ ಗದ್ದೆಗಳಲ್ಲೂ ರಾಶಿ ಮಾಡಲು ಕೂಡಿಟ್ಟ ನೂರಾರು ಬಣವಿಗಳಿದ್ದು ಬೆಳ್ ಬೆಳಿಗ್ಗೆ ಭಸ್ಮವಾದ ಎರಡು ಬಣವಿಗಳನ್ನು ನೋಡಿದ ರೈತರು ಆತಂಕಕ್ಕೊಳಗಾಗಿದ್ದಾರೆ, ಬೆಳಗಾವಿ ತಾಲೂಕಿನ ಶಿಂಧೊಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕಿಡಗೇಡಿಗಳು ಉದ್ದೇಶಪೂರ್ವಕವಾಗಿ ಬತ್ತದ ಬಣವಿಗಳಿಗೆ ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ.

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *