Breaking News

ಆಸ್ತಿಗಾಗಿ ತಂದೆಯನ್ನೇ ಮರ್ಡರ್ ಮಾಡಿದ ಕಿರಾತಕ ಮಗ..!

ಬೆಳಗಾವಿ- ಆಸ್ತಿಗಾಗಿ,ದುಡ್ಡಿಗಾಗಿ ತಂದೆಯನ್ನೇ ಮಗನೊಬ್ಬ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಮೂರು ದಿನಗಳ ಹಿಂದೆ ಈ ಘಟನೆ ನಡೆದಿತ್ತು,ಮಗ ಮಾಡಿದ ಹಲ್ಲೆಯಿಂದ ತಂದೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು,ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಬೆಳಗಾವಿ ನಗರದ ಖಡೇಬಜಾರ ಪೊಲೀಸ್ ಠಾಣಾ ಹದ್ದಿಯ ಪಾಟೀಲ ಮಾಳಾದಲ್ಲಿ ವಾಸವಿರುವ ಲಕ್ಷ್ಮಣ ಲಕ್ಕಪ್ಪ ಶಿರೂರ, ವಯಾ-50 ವರ್ಷ ಇವರ ಮಗ ಆರೋಪಿ ಸೋಮನಾಥ ಲಕ್ಷ್ಮಣ ಶಿರೂರ, ಸಾ-ಕೊತ್ವಾಲ್ ಗಲ್ಲಿ, ಬೆಳಗಾವಿ ಇವನು ತನ್ನ ತಂದೆಯ ಮನೆಗೆ ಬಂದು ನನಗೆ ಹಣ ಕೊಡು ಆಸ್ತಿಯಲ್ಲಿ ಪಾಲು ಕೊಡು ಅಂತಾ ಅಂದು ತಂಟೆ ತಕರಾರು ಮಾಡುತ್ತಿದ್ದ ಈ ವಿಚಾರವಾಗಿ ದಿನಾಂಕ 4-3-2021 ರಂದು ಸಂಜೆ 4-30 ಗಂಟೆಯ ಸುಮಾರಿಗೆ ತನ್ನ ತಂದೆಯ ಮನೆಯ ಬಳಿ ಬಂದು ಆಸ್ತಿ ಕೊಡು ಅಂತಾ ತಂಟೆ ಮಾಡಿ ತನ್ನ ಬಳಿ ಇದ್ದ ಚಾಕುವಿನಿಂದ ತನ್ನ ತಂದೆಯ ಎದೆಯ ಕೆಳ ಬಾಜು ಇರಿದು ಕೊಲೆ ಮಾಡಿದ್ದಾನೆ.

ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಕಾರ್ಯ ಪ್ರವೃತ್ತರಾದ ಖಡೇಬಜಾರ ಪೊಲೀಸ್ ಠಾಣೆಯ ಪೋಲಿಸ್ ಇನ್ಸ್‌ಪೆಕ್ಟರ್ ಡಿ ಬಿ ಶಿಂಧೆ ಹಾಗೂ ಅವರ ತಂಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿ ಸೋಮನಾಥ ಲಕ್ಷ್ಮಣ ಶಿರೂರ, ಸಾ-ಕೊತ್ವಾಲ್ ಗಲ್ಲಿ, ಬೆಳಗಾವಿ ಇವನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡೆಸಿದ್ದು ಪ್ರಕರಣ ತನಿಖೆಯಲ್ಲಿ ಇರುತ್ತದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *