Breaking News

ಚಾಕು ತೋರಿಸಿ ಹಣ ಬೈಕ್ ದೋಚಿಕೊಂಡು ಪರಾರಿ..

ಬೆಳಗಾವಿ- ನಗರದ ಕ್ಲಬ್ ರಸ್ತೆಯಲ್ಲಿರುವ ಸಿಪಿಎಡ್ ಮೈದಾನದ ಬಳಿ ಬೈಕ್ ಸವಾರನೊಬ್ಬನಿಗೆ ಚಾಕು ತೋರಿಸಿ ಬೆದರಿಸಿದ ಖದೀಮರು ಯುವಕನ ಬಳಿ ಇದ್ದ ಹಣ ಮತ್ತು ಬೈಕ್ ಕಸಿದುಕೊಂಡು ಪರಾರಿಯಾದ ಘಟನೆ ಈಗ ರಾತ್ರಿ ಒಂಬತ್ತು ಘಂಟೆ ಸುಮಾರಿಗೆ ನಡೆದಿದೆ

ಸುಳಗಾ ಹಿಂಡಲಗಾ ಗ್ರಾಮದ 29 ವರ್ಷ ವಿನಾಯಕ ಕಿಶೋರ ತುಪ್ಪದ ಬೆಳಗಾವಿಯಲ್ಲ 16ಸಾವಿರ ಸಾಲ ಮಾಡಿ ಹಣ ತೆಗೆದುಕೊಂಡು ತನ್ನ ಗ್ರಾಮಕ್ಕೆ ತೆರಳುವಾಗ ಸಿಪಿಎಡ್ ಮೈದಾನದ ಬಳಿ ಈ ಯುವಕನನ್ನು ತಡೆದ ಕಿರಾತಕರು ಯುವಕನಿಗೆ ಚಾಕು ತೋರಿಸಿ ಯುವಕನ ಮೇಲೆ ಹಲ್ಲೆ ಮಾಡಿ ಯುವಕನ ಬಾಕ್ಸರ್ ಬೈಕ್ ಮತ್ತು 16 ಸಾವಿರ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ
ರಾತ್ರಿ ಹೊತ್ತು ಒಂಟಿ ಬೈಕ್ ಸವಾರರನ್ನು ತಡೆದು ಹಣ ದೋಚುವ ಗ್ಯಾಂಗ್ ಹುಟ್ಟಿಕೊಂಡಿದೆ ಇಂತಹ ಪ್ರಕರಣಗಳು ಮರುಕಳಿಸುವ ಮೊದಲೇ ಗ್ಯಾಂಗ್ ಪತ್ತೆಗೆ ಪೋಲೀಸರು ಕ್ರಮ ಕೈಗೊಳ್ಳಬೇಕಾಗಿದೆ
ಕ್ಯಾಂಪ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಯುವಕ ಠಾಣೆಗೆ ತೆರಳಿದ್ದಾನೆ

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *