Breaking News

ಪ್ರತಿಷ್ಠಾಪಣೆಗೊಳ್ಳುವ ಮೊದಲೇ ವಿಸರ್ಜನೆಗೊಂಡ ವಿನಾಯಕ

ಬೆಳಗಾವಿ-ಬೆಳಗಾವಿ ನಗರದ ಶ್ರೀ ನಗರದಲ್ಲಿ ಸೋಮವಾರ ರಾತ್ರಿ ಶ್ರೀ ಗಣೇಶನ ಮೂರ್ತಿಯನ್ನು ಅಲ್ಲಿಯ ಸಾರ್ವಜನಿಕ ಗಣೇಶ ಉತ್ಸವ ಮಂಡಳದವರು ಪ್ರತಿಷ್ಠಾಪಿಸಲು ತಂದಾಗ ಮೂರ್ತಿ ವೀರೂಪಗೊಂಡ ಹಿನ್ನಲೆಯಲ್ಲಿ ಮಂಡಳದವರು ಮೂರ್ತಿಯನ್ನು ಪ್ರತಿಷ್ಠಾಪಣೆ ಮಾಡದೇ ಈ ಮೂರ್ತಿಯನ್ನು ಮಂಗಳವಾರ ಮಧ್ಯಾಹ್ನ 12 ಘಂಟೆಗೆ ನಗರದ ಕಿಲ್ಲಾ ಕೆರೆಯಲ್ಲಿ ವಿಸರ್ಜನೆ ಮಾಡಿದ ಘಟಣೆ ನಡೆದಿದೆ
ವಿರೂಪಗೊಂಡ ಮೂರ್ತಿಯನ್ನು ಮಂಗಳವಾರ ಮಧ್ಯಾಹ್ನ ನಗರದ ಕಿಲ್ಲಾ ಕೆರೆಯಲ್ಲಿ ವಿಸರ್ಜನೆ ಮಾಡಿದ ಶ್ರೀ ನಗರದ ಸಾರ್ವಜನಿಕ ಗಣೇಶ ಮಂಡಳದ ಯುವಕರು ಸುಮ್ಮನೇ ಕುಳಿತುಕೊಳ್ಳದೇ ತಕ್ಷಣ ಮೂರ್ತಿಕಾರನನ್ನು ಬೇಟಿಯಾಗಿ ನಾಲ್ಕು ಘಂಟೆಯಲ್ಲಿಯೇ ಬೆರೊಂದು ಮೂರ್ತಿ ತಯಾರಿಸಿ ಮಂಗಳವಾರ ರಾತ್ರಿ 9-30 ಘಂಟೆಗೆ ಪಾರ್ವತಿಯ ಕಂದ ವಿಘ್ನ ನಿವಾರಕ ವಿನಾಯಕನನ್ನು ಮರು ಪ್ರತಿಷ್ಠಾಪನೆ ಮಾಡಿದ ಅಪರೂಪದ ಘಟನೆ ನಡೆದಿದೆ
ಮಂಗಳವಾರ ಮಧ್ಯಾಹ್ನ ಭಕ್ತರಿಂದ ದೂರವಾದ ವಿನಾಯಕ ರಾತ್ರಿ ಮತ್ತೆ ರಾತ್ರಿ 9-30 ಕ್ಕೆ ಭಕ್ತರ ಆರಾಧನೆಗೆ ಸಿದ್ಧನಾದ
ಆದರೆ ಈ ಘಟನೆಯಿಂದ ವಿಚಲಿತರಾದ ಪೋಲಿಸರಿಗೆ ಗಣೇಶ ಪ್ರತಿಷ್ಟಾಪಣೆ ಹಾಗೂ ವಿಸರ್ಜನೆಯ ಅನುಭವ ಒಂದೇ ದಿನದಲ್ಲಿ ಆಯಿತು ಜೈಣೇಶ ಜೈ ಪಾರ್ವತಿ ಪುತ್ರ ಜೈ ವಿಘ್ನ ನಿವಾರಕ ಜೈ ಲಂಭೋಧರ

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *