Breaking News

ಕಾಜು, ಬದಾಮ, ಯಾಲಕ್ಕಿ,ದಾಲಚಿನ್ನಿ ಹೊತ್ಕೊಂಡು ಹೋದ್ರು…!!

ಬೆಳಗಾವಿ-ಬೆಳಗಾವಿಯ ರವಿವಾರ ಪೇಟೆಯ ಮದ್ಯ ಭಾಗದಲ್ಲಿ ಕಾಂದಾ ಮಾರ್ಕೆಟ್ ಇದೆ,ಈ ಮಾರ್ಕೆಟ್ ನಲ್ಲಿ ಮಸಾಲಿ ಮಾರಾಟ ಮಾಡುವ ಡಬ್ಬಾ ಅಂಗಡಿಗಳಿವೆ,ನಿನ್ನೆ ರಾತ್ರಿ,ಒಂದು ಡಬ್ಬಾ ಅಂಗಡಿ, ಕಳುವಾಗಿದ್ದು,ಕಳ್ಳರು ಯಾಲಕ್ಕಿ ಮತ್ತು ದಾಲಚಿನ್ನಿ ಹೊತ್ಕೊಂಡು ಹೋಗಿದ್ದಾರೆ.

ನಿನ್ನೆ ರಾತ್ರಿ ಮಸಾಲಿ ಅಂಗಡಿ, ದೋಚಿರುವ ಕಳ್ಳರು,ತುಟ್ಟಿ ಬೆಲೆಯ ಯಾಲಕ್ಕಿ, ದಾಲಚಿನ್ನಿ ಕಾಜು ಬದಾಮ,ಖಾರಿಕ್ ಸೇರಿದಂತೆ ಇತರ ತುಟ್ಟಿ ಬೆಲೆಯ ಮಸಾಲಿ ದೋಚಿದ್ದಾರೆ.

ಇಂದು ಬೆಳಗ್ಗೆ ಅಂಗಡಿ ತೆರೆಯಲು ಓದಾಗ ಎರಡು ಅಂಗಡಿಗಳು ಕಳುವಾದ ವಿಚಾರ ಬೆಳಕಿಗೆ ಬಂದಿದೆ,ಮಸಾಲಿ ಕಳುವಾದ ವಾಸನೆ ಎದ್ದಿದೆ. ಸ್ಥಳಕ್ಕೆ ಪೋಲೀಸರು ದೌಡಾಯಿಸಿ ಚೌಕಾಸಿ ನಡೆಸಿದ್ದಾರೆ.

ಈ ಮಸಾಲಿ ಅಂಗಡಿಗಳಲ್ಲಿ ಆಗಾಗ್ಗೆ ಕಳ್ಳತನ ನಡೆಯುವುದು ಸಾಮಾನ್ಯವಾಗಿದೆ. ಇದೊಂದೇ ಅಂಗಡಿ ಸತತವಾಗಿ ಆರು ಬಾರಿ ಕಳುವಾಗಿದೆ,ಹದಿನೈದು ಸಾವಿರ ರೂ ಮೌಲ್ಯದ ಮಸಾಲಿ,ಹತ್ತು ಸಾವಿರ ಮೌಲ್ಯದ ಮೋಬೈಲ್, ಮತ್ತು ಎರಡು ಸಾವಿರ ನಗದು ಹಣ ದೋಚಲಾಗಿದೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *