Breaking News

ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಕೂಲಿ ಕಾರ್ಮಿಕ.

ಬೆಳಗಾವಿ-ಸಾಲಗಾರರ ಕಾಟಕ್ಕೆ ಬೇಸತ್ತು ಕೂಲಿ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ,ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.ದಿಗ್ಗೇವಾಡಿ ಗ್ರಾಮದ ಅಪ್ಪಾಸಾಬ ಕಂಬಾರ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿ ಘಟನೆ ನೆದಿದ್ದು,ಆತ್ಮಹತ್ಯೆಗೂ ಮುನ್ನ ಸೆಲ್ಪಿ ವಿಡಿಯೋ ಮಾಡಿಟ್ಟು ನೇಣಿಗೆ ಶರಣಾಗಿದ್ದಾನೆ.ರೇಖಾ ಸಮಗಾರ ಹಾಗೂ ಭೀಮು ವಾಳಕೆ ಹೆಸರು ಹೇಳಿ ಸೆಲ್ಪಿ ವಿಡಿಯೋ ಮಾಡಿದ ಬಳಿಕ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಬ್ಬರಿಂದ ಅಂದಾಜು 50 ಸಾವಿರ ಸಾಲ ಪಡೆದಿದ್ದ ಅಪ್ಪಾಸಾಬ,50 ಸಾವಿರಕ್ಕೆ ಪ್ರತಿಯಾಗಿ ಲಕ್ಷಾಂತರ ರೂಪಾಯಿ ಬಡ್ಡಿ ಕೊಟ್ಟಿದ್ದ ಅಪ್ಪಾಸಾಬ ಸಾಲಗಾರರ ಕಾಟದಿಂದ ರೋಸಿ ಹೋಗಿದ್ದ,ಬಡ್ಡಿ ಹಣ ಕೊಟ್ಟರು ಇನ್ನು ಹಣ ನೀಡುವಂತೆ ಪೀಡಿಸುತ್ತಿದ್ದ ರೇಖಾ ಹಾಗೂ ಭೀಮು ನನ್ನ ಸಾವಿಗೆ ಕಾರಣ ಎಂದು ಅಪ್ಪಾಸಾಹೇಬ್ ಆರೋಪಿಸಿದ್ದಾನೆ.

ಖಾಸಗಿ ಕ್ರಶರ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮೃತ ಅಪ್ಪಾಸಾಬ,ನನ್ನ ಸಾವಿಗೆ ಇಬ್ಬರೆ ಕಾರಣ ಬೇರೆ ಯಾರಿಗೂ ತೊಂದರೆ ನೀಡದಂತೆ ಅಪ್ಪಾಸಾಬ ಮನವಿ ಮಾಡಿಕೊಂಡಿದ್ದಾನೆ.ಸ್ಥಳಕ್ಕೆ ರಾಯಬಾಗ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ಇಬ್ಬರೂ ಆರೋಪಿಗಳನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *