ಬೆಳಗಾವಿ: ಮರ್ಡರ್ ಆರೋಪಿಗಳ ಸುಳಿವು ಕೊಟ್ಟ ಸುಣ್ಣದ ಡಬ್ಬಿ….!!

ಬೆಳಗಾವಿ-ಮಗ ದಿನನಿತ್ಯ ಕುಡಿದು ಗಲಾಟೆ ಮಾಡಿ ಎಲ್ಲರಿಗೂ ತೊಂದರೆ ಕೊಡುತ್ತಿದ್ದಾನೆ ಎಂದು ಬೇಸತ್ತ ತಂದೆ ಮಗನ ಕೊಲೆಗೆ ಸುಪಾರಿ ಕೊಟ್ಟು ಹೆತ್ತ ಮಗನನ್ನೇ ಭೀಕರವಾಗಿ ಕೊಲೆ ಮಾಡಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಹಲವಾರು ದಿನಗಳಿಂದ ಕೊಲೆ ಮಾಡಿದ್ದು ಯಾರು ? ಅನ್ನೋದೇ ಗೊತ್ತಾಗಿರಲಿಲ್ಲ.ಮೃತ ವ್ಯಕ್ತಿಯ ಜೇಬಿನಲ್ಲಿ ಸಿಕ್ಕಿದ್ದ ಸುಣ್ಣದ ಡಬ್ಬಿ ಆರೋಪಿಗಳ ಸುಳಿವು ನೀಡಿದ್ದು.ಮುರಗೋಡ ಪೋಲೀಸರು ಇದೇ ಸುಳಿವು ಆಧರಿಸಿ ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆ ಪ್ರಕರಣ ಕುರಿತು ಬೆಳಗಾವಿ ಎಸ್ಪಿ ಸಂಜೀವ ಪಾಟೀಲ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆಗಸ್ಟ್ 20 ರಂದು ಮುರಗೋಡ ಠಾಣೆ ವ್ಯಾಪ್ತಿ ಶವ ಪತ್ತೆಯಾಗಿ ಪ್ರಕರಣ ದಾಖಲಾಗಿತ್ತು.ಸಂಗಮೇಶ್ ಮಾರುತಿ ತಿಗಡಿ (35) ಎಂಬಾತನ ಹತ್ಯೆಯಾಗಿತ್ತು.ಪ್ರಕರಣ ಭೇದಿಸಿದ ಡಿಎಸ್ಪಿ ರಾಮನಗೌಡ ಹಟ್ಟಿ ನೇತೃತ್ವದ ತಂಡ ತನಿಖೆ ಮಾಡಿ,
ಮಗನ ಸ್ನೇಹಿತನಿಗೆ ಕೊಲೆ ಮಾಡಲು ಸುಪಾರಿ ಕೊಟ್ಟು ತಂದೆ ಮಾರುತಿ.ತನ್ನ ಮಗನನ್ನೇ ಕೊಲೆ ಮಾಡಿಸಿರುವ ವಿಚಾರ ಬೆಳಕಿಗೆ ಬಂದಿದೆ.

ತಂದೆ ಮಾರುತಿ,ಮಂಜುನಾಥ ಹೊಂಗಲ(43) ಅಡಿವೆಪ್ಪ ಬೊಳತ್ತಿನ(38)ಕೊಲೆ ಆರೋಪಿಗಳಾಗಿದ್ದಾರೆ.
ಈರುಳ್ಳಿವ್ಯಾಪಾರಿಗಳಾಗಿದ್ದ ಮೃತ ಸಂಗಮೇಶ ಹಾಗೂ ಆರೋಪಿ ಮಂಜುನಾಥ ಹೊಂಗಲ.
ಆರೋಪಿ ತನ್ನ ಅಪ್ತ ಅಡಿವೆಪ್ಪ ಬೊಳತ್ತಿನ ಜೊತೆಗೂಡಿ ಕೊಲೆ ಮಾಡಿದ್ದಾರೆ.ಸಂಗಮೇಶ್ ಗೆ ಕಂಠಪೂರ್ತಿ ಕುಡಿಸಿ ಬೈಕ್ ಮೇಲೆ ಕರೆದುಕೊಂಡು ಹೋಗಿ,ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ.

ಕುಟರನಟ್ಟಿ ಗ್ರಾಮದ ಸಮೀಪದಲ್ಲಿ ಶವ ಎಸೆದು ಪರಾರಿಯಾಗಿದ್ದ ಆರೋಪಿಗಳು ಈಗ ಖಾಕಿ ಬಲೆಗೆ ಬಿದ್ದಿದ್ದಾರೆ.ಮೃತ ವ್ಯಕ್ತಿ ಅತೀಯಾದ ಮದ್ಯವ್ಯಸನಿ ಅನ್ನೋದೇ ಕೊಲೆಗೆಕಾರಣವಾಗಿದ್ದು.ಅತೀ ಮದ್ಯಪಾನ ಮಾಡಿ ಮನೆಯಲ್ಲಿ ತೊಂದರೆ ಕೊಡುತ್ತಿದ್ದ ಎಂಬುವುದು ತನಿಖೆಯಿಂದ ತಿಳಿದು ಬಂದಿದೆ.

ಮೃತ ವ್ಯಕ್ತಿಯ ಜೇಬಿನಲ್ಲಿ ಸಿಕ್ತು ಕೊಲೆ ಆರೋಪಿಗಳ ಸುಳಿವು.

ಮೃತ ವ್ಯಕ್ತಿ ಜೇಬಿನಲ್ಲಿ ಒಂದು ಸುಣ್ಣದ ಡಬ್ಬಿ ಪತ್ತೆಯಾಗಿತ್ತು
ಆ ಸುಣ್ಣದ ಡಬ್ಬಿಯಲ್ಲಿ ಪತ್ತೆಯಾಗಿದ್ದು ಆರೋಪಿ ಮಂಜುನಾಥನ ಮೊಬೈಲ್ ನಂಬರ್.ಇದನ್ನು ಆಧರಿಸಿ ತನಿಖೆ ಮಾಡಿರುವ ಪೋಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *