Breaking News
Home / Breaking News / ಕಬ್ಬಿನ ತೋಟದಲ್ಲಿ ಗಾಂಜಾ ಘಾಟು…!!

ಕಬ್ಬಿನ ತೋಟದಲ್ಲಿ ಗಾಂಜಾ ಘಾಟು…!!

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಮುದೇನೂರ ಗ್ರಾಮದ ಲಕ್ಕಪ್ಪ ಬಾಲಪ್ಪ ಮೇತ್ರಿ ಊರ್ಫ ಮಾದರ ಈತನ ಹೊಲದಲ್ಲಿ ಅಭಕಾರಿ ಅಧಿಕಾರಿಗಳ ದಾಳಿ ಅಂದಾಜು 35000=00 ರೂ. ಮೌಲ್ಯದ ಗಾಂಜಾ ಗಿಡಗಳು ಜಪ್ತಿ ಮಾಡಿದ್ದಾರೆ.

ದಿನಾಂಕ: 20/09/2023 ರಂದು ಮಾನ್ಯ ಅಬಕಾರಿ ಆಯುಕ್ತರಾದ ಡಾ!! Y ಮಂಜುನಾಥ, ಬೆಳಗಾವಿ ಕೇಂದ್ರ ಸ್ಥಾನ ಹಾಗೂ ಬೆಳಗಾವಿ ದಕ್ಷಿಣ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಕುಮಾರಿ ವನಜಾಕ್ಷೀ, ಎಮ್ ಇವರ ಮಾರ್ಗದರ್ಶನದಲ್ಲಿ ಮತ್ತು ರಾಮನಗೌಡರ ಮುದಿಗೌಡ್ರ, ಅಬಕಾರಿ ಉಪ ಅಧೀಕ್ಷಕರು, ರಾಮದುರ್ಗ ಉಪ ವಿಭಾಗ ಇವರ ನೇತೃತ್ವದಲ್ಲಿ ಬಸವರಾಜ ಕಿತ್ತೂರ ಇವರು ತಂಡ ರಚಿಸಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಮುದೇನೂರ ಗ್ರಾಮದ ಲಕಪ್ಪ ಬಾಲಪ್ಪ ಮೇತ್ರಿ ಊರ್ಪ ಮಾದರ ಈತನ ಹೊಲದಲ್ಲಿ ಅಬಕಾರಿ ದಾಳಿ ನಡೆಸಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಎರಡು ಗಿಡಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.

ಒಟ್ಟು 07 ಕೆಜಿ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿತನಾದ ಲಕ್ಕಪ್ಪ ಬಾಲಪ್ಪ ಮೇತ್ರಿ ಊರ್ಥ ಮಾದರ ವಯಸ್ಸು:51 ವರ್ಷ. ದಾಳಿಸಮಯದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣವನ್ನು ರಾಮದುರ್ಗ ವಲಯ ನಿರೀಕ್ಷಕರಾದ ಬಸವರಾಜ ಕಿತ್ತೂರ ರವರು NDPS ಕಾಯಿದೆಯಡಿ ದಾಖಸಿದ್ದು ತನಿಖೆ ಮುದುವರೆದಿದೆ. ಜಪ್ತುಪಡಿಸಿದ ಮುದ್ದೆಮಾಲನ ಒಟ್ಟು ಅಂದಾಜು ಮೌಲ್ಯ 35000=00 ಸಾವಿರ ರೂ.ಗಳು, ದಾಳಿಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು

ಅಬಕಾರಿ ಉಪ ಅಧೀಕ್ಷಕರಾದ ರಾಮನಗೌಡರ ಮುದಿಗೌಡ್ರ, ಅಬಕಾರಿ ನಿರೀಕ್ಷಕರು ಮಹೇಶ ಮಠಾಣಿ ರಾಮದುರ್ಗ ಉಪ ವಿಭಾಗ ಹಾಗೂ ಅಬಕಾರಿ ನಿರೀಕ್ಷಕರಾದ ಬಸವರಾಜ ಕಿತ್ತೂರ, ಹಾಗೂ ಅಬಕಾರಿ ಸಿಬ್ಬಂದಿಯಾದ ನಿಂಗಪ್ಪ ದುಂಡಾನ,ರಂಗಪ್ಪ ಗೌಡರ,ವಿಠಲ ಕ್ವಾರಿ, ಸುಭಾಸ ಅಥರ್ಗಾ, ಮಂಜುನಾಥ ಶಿಗಿಹಳ್ಳಿ, ಅಬಕಾರಿ ವಾಹನ ಚಾಲಕರಾದ ಬಸವರಾಜ ಕರೆಣ್ಣವರ & ಶಾನೂರ ಜಮಾದಾರ ಉಪಸ್ಥಿತರಿದ್ದರು.

Check Also

ಬೆಳಗಾವಿ ಏರ್ ಪೋರ್ಟಿನಲ್ಲಿ ಸಿದ್ರಾಮಯ್ಯ ವಿಮಾನ ಲ್ಯಾಂಡಿಂಗ್ ನಿರಾಕರಣೆ.

ಬೆಳಗಾವಿ-ಸಿಎಂ ಸಿದ್ದರಾಮಯ್ಯ ವಿಶೇಷ ವಿಮಾನಕ್ಕೆ ಬೆಳಗಾವಿ ವಿಮಾನ ನಿಲ್ದಾಣ ಎಂಟ್ರಿಗೆ ನಿರಾಕರಿಸಲಾಗಿದೆ ಸಿಎಂ ಆಗಮನ ಸಂದರ್ಭದಲ್ಲಿ ಪ್ರಧಾನಿ ಮೋದಿ ನಿರ್ಗಮನ …

Leave a Reply

Your email address will not be published. Required fields are marked *