ಇಂದು ಬೆಳಗಾವಿಯಲ್ಲಿ ಇಬ್ಬರೂ ಮಂತ್ರಿಗಳ ಕಾರ್ಯಕ್ರಮ…!!

ಬೆಳಗಾವಿ -ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ,ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಇಬ್ಬರೂ ಮಂತ್ರಿಗಳ ಕಾರ್ಯಕ್ರಮ ಬೆಳಗಾವಿ ನಗರದಲ್ಲಿ ಪ್ರತ್ಯೇಕವಾಗಿ ಏಕಕಾಲಕ್ಕೆ ಜರುಗಲಿವೆ.

ಇದು ಆಕಸ್ಮಿಕವೋ ಅಥವಾ ಸಮಯದ ಅಭಾವವೋ ಗೊತ್ತಿಲ್ಲ,ಆದ್ರೆ ಇತ್ತೀಚೆಗೆ ಇಬ್ಬರು ಮಂತ್ರಿಗಳು ಒಂದೇ ದಿನ ಬೆಳಗಾವಿ ನಗರದಲ್ಲಿ ಕಾಣಿಸಿಕೊಳ್ತಾರೆ,ಇಬ್ಬರೂ ಮಂತ್ರಿಗಳು ಬೆಳಗಾವಿಗೆ ಬಂದಾಗ ಕಾರ್ಯಕ್ರಮ ಆಯೋಜನೆ ಮಾಡ್ತಾರೆ. ಎರಡೂ ಕಾರ್ಯಕ್ರಮ ಒಂದೇ ದಿನ ಇರ್ತಾವೆ ಕಾರ್ಯಕ್ರಮಗಳ ಟೈಮೀಂಗ್ ಕೂಡಾ ಒಂದೇ ಆಗಿರುತ್ರದೆ. ಇದು ಬೆಳಗಾವಿ ಮಹಾನಗರದ ವಿಶೇಷ ಎನ್ನಬಹುದು.

ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಉಸ್ತುವಾರಿ,ಲಕ್ಷ್ಮೀ ಹೆಬ್ಬಾಳಕರ್ ಅವರು ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ, ಇಬ್ಬರೂ ಮಂತ್ರಿಗಳ ಕಾರ್ಯಕ್ರಮ ಒಂದೇ ದಿನ ಏಕಕಾಲಕ್ಕೆ ನಡೆಯುತ್ತದೆ. ಇಂದು ಬೆಳಗ್ಗೆ 11-00 ಗಂಟೆಗೆ ಬೆಳಗಾವಿ ನಗರದ KPTCL ಹಾಲ್ ನಲ್ಲಿ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಜನತಾ ದರ್ಶನ ಕಾರ್ಯಕ್ರಮ ನಡೆಯಲಿದೆ. ಅದೇ ಸಮಯಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪೋಷಣೆ ಮಾಸಾಚರಣೆ ಕಾರ್ಯಕ್ರಮ ಬೆಳಗಾವಿಯ ಕುಮಾರ ಗಂಧರ್ವ ಸಭಾಭವನದಲ್ಲಿ ನಡೆಯಲಿದೆ.ಇಬ್ಬರೂ ಮಂತ್ರಿಗಳು ಇವತ್ತು ಏಕಕಾಲಕ್ಕೆ ಬೆಳಗಾವಿ ಮಹಾನಗರದಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *