ಯುವಕನ, ಆತ್ಮಹತ್ಯೆಗೆ ಬಂಧನದ ಭೀತಿಯೇ ಕಾರಣ..

ಬೆಳಗಾವಿ- ಊರಲ್ಲಿ ಗಲಾಟೆ ಮಾಡಿ,ಪೋಲೀಸರು ಬಂಧಿಸುತ್ತಾರೆ ಎಂದು ಹೆದರಿ,ಯುವಕನೊಬ್ಬ ಇಂದು ಮಧ್ಯಾಹ್ನ ಬೆಳಗಾವಿ ಡಿಸಿ ಕಚೇರಿಯಲ್ಲಿ ಪಿನೈಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಲಗಮೇಶ್ವರ್ ಗ್ರಾಮದ ಯುವಕ ಕುಮಾರ ಕೊಪ್ಪದ ಎಂಬಾತ ಈ ಹಿಂದೆ ಊರಲ್ಲಿ ಗಲಾಟೆ ಮಾಡಿದ್ದು ಇನ್ನೇನು ಪೋಲೀಸರು ಬಂದಿಸುತ್ತಾರೆ ಎಂದು ಹೆದರಿ ಬೆಳಗಾವಿಗೆ ಬಂದಿದ್ದ, ಬೆಳಗಾವಿಯಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ಆದ್ರೆ ಸಂಭಂಧಿಕರಿಗೆ ಈತ ಗಲಾಟೆ ಮಾಡಿ ಬಂದಿರುವ ವಿಷಯ ಗೊತ್ತಾದ ಬಳಿಕ ಸಂಭಂಧಿಕರು ಈತನಿಗೆ ಬಸ್ ಚಾರ್ಜ್ ಕೊಟ್ಟು ಊರಿಗೆ ವಾಪಸ್ ಹೋಗುವಂತೆ ಹೇಳಿದ್ದರು ಎಂದು ಗೊತ್ತಾಗಿದೆ.

ಊರಿಗೆ ಹೋದ್ರೆ ಪೋಲೀಸರು ಬಂಧಿಸುತ್ತಾರೆ ಎಂದು ಹೆದರಿ ಪಿನೈಲ್ ಬಾಟಲಿ ಖರೀಧಿ ಮಾಡಿದ ಈ ಯುವಕ ಸಂಬಂಧಿಕರ ಮನೆಯಿಂದ ನೇರವಾಗಿ ಡಿಸಿ ಕಚೇರಿಗೆ ಬಂದು ಪಿನೈಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.

ಡಿಸಿ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದರೆ ಬಚಾವ್ ಆಗಬಹುದು, ಪೋಲೀಸರ ಬಂಧನದ ಭೀತಿಯಿಂದ ಪಾರಾಗಬಹುದು ಎಂದು ಆಲೋಚಿಸಿದ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಡಿಸಿ ಕಚೇರಿಯನ್ನು ಆಯ್ಕೆ ಮಾಡಿಕೊಂಡಿದ್ದ ಎಂದು ಬಲ್ಲ ಮೂಲಗಳು ತಿಳಿಸಿವೆ.

ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *