ನಾಲೆಯಲ್ಲಿ ಕೊಚ್ಚಿಹೋದ ಬೈಕ್ ,ಒಬ್ಬ ಬಚಾವ್ ಇನ್ನೊಬ್ಬ ನಾಪತ್ತೆ…

ಬೆಳಗಾವಿ- ಶ್ರಾವಣಮಾಸದ ನಿಮಿತ್ಯ ಕಟೀಂಗ್ ಮಾಡಿಸಿಕೊಳ್ಳಲು ಅಲತಗಾ ಗ್ರಾಮದಿಂದ ಪಕ್ಕದ ಕಂಗ್ರಾಳಿ ಗ್ರಾಮಕ್ಕೆ ಬೈಕ್ ಮೇಲೆ ಹೋಗಿದ್ದ ಇಬ್ಬರು ಯುವಕರು ಅಲತಗಾ ಹಳ್ಳದ ಪ್ರವಾಹಕ್ಕೆ ಸಿಲುಕಿದ್ದು ಓರ್ವ ಬಚಾವ್ ಆಗಿದ್ದು ಇನ್ನೋರ್ವ ನಾಪತ್ತೆಯಾದ ಘಟನೆ ಇಂದು ಸಂಜೆ ನಡೆದಿದೆ.

ಅಲತಗಾ ಗ್ರಾಮದ ಓಂಕಾರ ಪಾಟೀಲ ಮತ್ತು ಜ್ಯೋತಿನಾಥ ಪಾಟೀಲ ಎಂಬ ಇಬ್ಬರು ಯುವಕರು ಬೈಕ್ ಮೇಲೆ ಕಂಗ್ರಾಳಿಯಿಂದ ಸ್ವಗ್ರಾಮ ಅಲತಗಾ ಗ್ರಾಮಕ್ಕೆ ಮರಳಿ ಬರುವಾಗ ಬೈಕ್ ಹಳ್ಳದ ರಬಸದಲ್ಲಿ ಕೊಚ್ಚಿ ಹೋಗಿದೆ‌. ಓಂಕಾರ ಪಾಟೀಲ ಎಂಬ ಯುವಕ ನಾಪತ್ತೆಯಾಗಿದ್ದು ಜ್ಯೋತಿನಾಥ ಪಾಟೀಲ ಎಂಬಾತ ಬಚಾವ್ ಆಗಿದ್ದಾನೆ.

ಘಟನಾ ಸ್ಥಳಕ್ಕೆ ಕಾಕತಿ ಪೋಲೀಸರು ದೌಡಾಯಿಸಿದ್ದು ನಾಪತ್ತೆಯಾದ ಯುವಕನ ಶೋಧ ಕಾರ್ಯಾಚರಣೆ ನಡೆಯುತ್ತಿದೆ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *