Breaking News

ಬೆಳಗಾವಿಯಲ್ಲಿ ಯುವಕನಿಗೆ ಚಾಕು ಇರಿತ.

ಬೆಳಗಾವಿ -ಬೆಳಗಾವಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತವಾದ ಘಟನೆ ಬೆಳಗಾವಿಯ ಕಣಬರ್ಗಿ ಪ್ರದೇಶದಲ್ಲಿ ನಡೆದಿದೆ.

ನಾಳೆ ತಂಗಿ ಮದುವೆ ಇಂದು ಯುವಕರ ಗ್ಯಾಂಗ್ ನಿಂದ ಅಣ್ಣನಿಗೆ ಚಾಕು ಇರಿತವಾಗಿದೆ. ನಾಳೆ ತಂಗಿಯ ಮದುವೆಯ ತಯಾರಿ ಮಾಡಬೇಕಾದ ಅಣ್ಣ ಚಾಕೂ ಇರಿತದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.ಮಂಜುನಾಥ್ ನಿಂಗಪ್ಪ ಕೆಂಪ(23) ಗಂಭೀರ ಗಾಯಗೊಂಡ ಯುವಕನಾಗಿದ್ದು,ನಿನ್ನೆ ತಡರಾತ್ರಿ ಬೈಕ್ ಟಚ್ ಆಗಿ ಮಂಜುನಾಥ್ ಬೈಕ್ ಬೇರೊಬ್ಬರ ಬೈಕ್ ಗೆ ಟಚ್ ಆಗಿತ್ತು. ಈ ವೇಳೆ ಇಬ್ಬರ ನಡುವೆ ವಾಗ್ವಾದ ಆಗಿತ್ತು.

ವಾಗ್ವಾದ ಆಗುತ್ತಿದ್ದಂತೆ ಸ್ಥಳೀಯರು ಜಗಳ ಬಗೆಹರಿಸಿ‌ ಕಳಿಸಿದ್ದರು.ಆದ್ರೆನಿನ್ನೆ ವಾಗ್ವಾದವಾದ ವಿಚಾರಕ್ಕೆ ಇಂದು ಬೆಳಗ್ಗೆ ಯುವಕರ ಮಧ್ಯೆ ಮಾರಾಮಾರಿ ಆಗಿದೆ.
ಇಂದು ಏಕಾಏಕಿ ಬಂದು ಯುವಕ ಮಂಜುನಾಥ್ ಮೇಲೆ‌ ಹಲ್ಲೆ ಮಾಡಲಾಗಿದೆ.ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಯುವಕರ ಗುಂಪು.ಸುಮಾರು ನಾಲ್ಕೈದು ಯುವಕರಿಂದ ಮಂಜುನಾಥ್ ಮೇಲೆ ಹಲ್ಲೆ ಮಾಡಿದ್ದಾರೆ.ಯುವಕ ಮಂಜುನಾಥ್ ಎದೆ, ಕೈ ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ.

ಗಾಯಗೊಂಡ ಯುವಕ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Check Also

ಬೆಳಗಾವಿ, ಡಿಸಿಸಿ ಬ್ಯಾಂಕ್ ಚುನಾವಣೆಗೆ ರಾಹುಲ್ ಜಾರಕಿಹೊಳಿ ಎಂಟ್ರಿ….!!

ಬೆಳಗಾವಿ – ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ರಾಜಕಾರಣಕ್ಕೆ ಪ್ರವೇಶ ಪಡೆಯುವವರ ಹೆಬ್ಬಾಗಿಲು ಆಗಿರುವ ಬೆಳಗಾವಿ ಡಿಸಿಸಿ ಬ್ಯಾಂಕಿನ ಚುನಾವಣೆಗೆ …

Leave a Reply

Your email address will not be published. Required fields are marked *