Breaking News

ವರದಕ್ಷಣೆಗಾಗಿ ಪತ್ನಿಯ ಕೂದಲು ಕಟ್ ಮಾಡಿ ಸಿಗರೇಟಿನಿಂದ ಸುಟ್ಟ ಭೂಪ..

 

ಬೆಳಗಾವಿ-ವರದಕ್ಷಣೆ ನೀಡುವಂತೆ ಕಿರುಕುಳ ನೀಡಿ ಕುಡಿದ ಅಮಲಿನಲ್ಲಿ ಪತ್ನಿಯ ತಲೆ ಕೂದಲು ಕತ್ತಿರಿಸಿ ಸಿಗರೇಟ್ ನಿಂದ ಸುಟ್ಟು, ಚಾಕುವಿನಿಂದ ಕೈ, ಮುಖದ ಮೆಲೆ ಹಲ್ಲೆ ಮಾಡಿದ ಅಮಾನವೀಯ ಘಟನೆ ನಡೆದಿದೆ. ಗಂಡನಿಂದ ದಿನನಿತ್ಯ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ ಪತ್ನಿ
ರಕ್ಷಣೆ ನೀಡುವಂತೆ ಪೋಲಿಸರ ಮೊರೆ ಹೋಗಿದ್ದಾಳೆ. ಬೆಳಗಾವಿ ಜಿಲ್ಲೆ
ಹುಕ್ಕೇರಿ ತಾಲೂಕಿನ ಶಾಬಂದರ್ ಗ್ರಾಮದ ಕಾವೇರಿ ಶಾಂತಪ್ಪ ವಾಲಿ..(೨೦)ಕಿರುಕುಳಕ್ಕೆ ಒಳಗಾದ ಪತ್ನಿಯಾಗಿದ್ದಾರೆ. ಕಳೆದು ಒಂದು ವರ್ಷದ ಹಿಂದೆ ಅರ್ಜುನ ಬಾಗರಾಯ ಜೊತೆ ಮದುವೆಯಾಗಿದ್ದು
ಪತಿ ಅರ್ಜುನ ದಿನನಿತ್ಯ ಕಿರುಕುಳ ನೀಡುವಂತೆ ವತ್ತಾಸಿದ್ದಾನೆ. ಸದ್ಯ ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಪ್ಯೂವುನ್ ಕೆಲಸ ನಿರ್ವಹಿಸುತ್ತಿರುವ ಪತಿ ಅರ್ಜುನ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದ ನಿವಾಸಿ ಯಾಗಿದ್ದಾರೆ. ಕಳೆದ ೬ ತಿಂಗಳಿಂದ ಗಂಡನೊಂದಿಗೆ ಬೆಂಗಳೂರಿನಲ್ಲಿ
ನೆಲೆಸಿದ್ದ ಪತ್ನಿ ಕಾವೇರಿ ಬೆಂಗಳೂರಿನಲ್ಲಿ ಇದ್ದಾಗ ಈ ರೀತಿಯ ಹಿಂಸೆ ನೀಡಿದ್ದಾನೆ ಪತ್ನಿಆರೋಪಿಸಿದ್ದಾಳೆ. ಇನ್ನು
ಬೆಳಗಾವಿ ಮಹಿಳಾ ಪೊಲೀಸ ಠಾಣೆಯಲ್ಲಿ ಪತಿ ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿದೆ.

Check Also

ಕರ್ನಾಟಕದ ಜೊತೆ ಮಹಾರಾಷ್ಟ್ರದ ಮಹಾ ಪುಂಡಾಟಿಕೆ

ಬೆಳಗಾವಿ -ಆರೋಗ್ಯದ ವಿಚಾರದಲ್ಲಿ ಮಹಾರಾಷ್ಟ್ರ ಬೌಂಡರಿ ಕ್ರಾಸ್ ಮಾಡಿ ಬೆಳಗಾವಿ ಗಡಿಗೆ ನುಗ್ಗಿ ಆಯ್ತು, ಈಗ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *