Breaking News

ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ,ಕ್ರಾಂತಿವೀರ ರಾಯಣ್ಣ

ಬೆಳಗಾವಿ-ಮನೆಗೊಬ್ಬ ರಾಯಣ್ಣ,ಮತ್ತೆ ಹುಟ್ಟಿ ಬಾರಣ್ಣಾ,ಮನೆಗೊಬ್ಬ ಚೆನ್ನಮ್ಮ ಮತ್ತೆ ಹುಟ್ಟಿ ಬಾರಮ್ಮ,ಎಂಬ ಘೋಷವಾಕ್ಯ ಈಗ ನಿಜವಾಗುತ್ತಿದೆ,ಯಾಕಂದ್ರ ಕ್ರಾಂತಿಯ ನೆಲ ಬೆಳಗಾವಿಯಲ್ಲಿ ಈಗ ಅಭಿಮಾನದ ಕ್ರೇಜ್ ಶುರುವಾಗಿದೆ‌.

ಬೆಳಗಾವಿಯ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನುಷ್ಠಾನಗೊಳಿಸಿದ ಬಳಿಕ,ರಾಯಣ್ಣನ ಅಭಿಮಾನಿಗಳ ಹೃದಯದಿಂದ ಅಭಿಮಾನ ಸೆಲೆ ಹೊರ ಹೊಮ್ನುತ್ತಲೇ ಇದೆ.

ಯುವಕರು ಚಿತ್ರ ರಂಗದ ನಟ,ನಟಿಯರ ಟ್ಯಾಟು ಬಿಡಿಸಿಕೊಂಡು ತಮ್ಮ ಅಭಿಮಾನ ವ್ಯೆಕ್ತ ಪಡಿಸಿದ್ದನ್ನು ನಾವೆಲ್ಲ ನೋಡಿದ್ದೇವೆ,ಆದ್ರೆ ಈಗ ಬೆಳಗಾವಿ ಸಮೀಪದ ಮಾರ್ಕಂಡೇಯ ನಗರದ ಯುವ ಅಭಿಮಾನಿ ಮಲ್ಲಪ್ಪ ಗುಂಡ್ಯಾಗೋಳ ತನ್ನ ಎದೆಯ ಮೇಲೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಚಿತ್ರ ಬಿಡಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾನೆ.

ಅಭಿಮಾನಿ ಮಲ್ಲಪ್ಪನ ಅಭಿಮಾನ ನೋಡಿ ಬಹಳಷ್ಟು ಯುವಕರು ತಮ್ಮ ಕೆಚ್ಚೆದೆಯ ಮೇಲೆ ರಾಯಣ್ಣನನ್ನು ವೀರಾಜಿಸಿಕೊಳ್ಳಲು ಮುಂದೆ ಬಂದಿದ್ದಾರೆ.

Check Also

ಆಪರೇಷನ್ ಸಿಂಧೂರ್ ನಲ್ಲಿ ಬೆಳಗಾವಿಯ ಸೊಸೆ…

ಬೆಳಗಾವಿ- ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮನ ಕ್ರಾಂತಿಯ ನೆಲ, ದೇಶದಲ್ಲಿ ಕ್ರಾಂತಿ ಆದಾಗ …

Leave a Reply

Your email address will not be published. Required fields are marked *