ಹೋರಾಟ..ಹಾರಾಟ..ಮತ್ತೇ ಚೀರಾಟ,ಪ್ರಯಾಣಿಕರ ಗೋಳಾಟ….!

ಬೆಳಗಾವಿ-ಸಂಧಾನ ಸಕ್ಸೆಸ್ ಆಗಿದೆ ಅಂತಾ ಮಾದ್ಯಮಗಳಲ್ಲಿ ಸುದ್ಧಿ ಬಂತು,ಡಿಪೋದಲ್ಲಿ ಇದ್ದ ಬಸ್ ಬೆಳಗಾವಿಯ ಬಸ್ ನಿಲ್ಧಾಣಕ್ಕೆ ಬಂತು,ಬಸ್ಸಿನ ನಿರ್ವಾಹಕ,ಬೆಳಗಾವಿ- ಮುಂಬಯಿ ಬೋರ್ಡ್ ಹಾಕುತ್ತಿದ್ದಂತೆಯೇ ಸಂಧಾನ ಬೋಗಸ್ ಅಂತಾ ಮಾಹಿತಿ ಬಂತು,ನಿಲ್ಧಾಣಕ್ಕೆ ಬಂದಿದ್ದ ಬಸ್ ಮುಂಬಯಿ ಗೆ ಹೋಗುವ ಬದಲು ಮತ್ತೆ ಡಿಪೋಗೆ ಹೋಯ್ತು,ಇದು ಬೆಳಗಾವಿ ಬಸ್ ನಿಲ್ಧಾಣದಲ್ಲಿ ಇಂದು ಸಂಜೆ ನಡೆದ ಕಹಾನಿ..

ಬೆಳಗಾವಿ ಬಸ್ ನಿಲ್ದಾಣದಲ್ಲಿ ಸಾರಿಗೆ ಸಿಬ್ಬಂದಿ ಪ್ರತಿಭಟನೆ ಮುಂದುವರೆದಿದೆ.ಡಿಪೋದಿಂದ ನಿಲ್ದಾಣಕ್ಕೆ ಬಂದಿದ್ದ ಬೆಳಗಾವಿ ಮುಂಬೈ ಬಸ್ ವಾಪಸ್ ಡಿಪೋಗೆ ಹೋಗಿದೆ.

ಬೆಳಗಾವಿಯಿಂದ ವಿವಿಧೆಡೆ ತೆರಳಬೇಕಿದ್ದ ಬಸ್ ಸಂಚಾರ ಸ್ಥಗಿತಗೊಂಡಿದೆ. ನಿಲ್ದಾಣಕ್ಕೆ ಬಂದು ಮತ್ತೆ ಡಿಪೋದತ್ತ ಬಸ್‌ಗಳು ಮರಳಿವರ

ಮಾದ್ಯಮಗಳಲ್ಲಿ ಸಂಧಾನ ಸಕ್ಸೆಸ್ ಎನ್ನುವ ಸುದ್ಧಿ ನೋಡಿ, ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು ಮತ್ತೆ ಪರದಾಡುವಂತಾಯಿತು,ನಿಟ್ಟುಸಿರು ಬಿಟ್ಟ ಪೋಲೀಸರು ಮತ್ತೆ ಲಾಠಿ ಹಿಡಿಯಬೇಕಾದ ಪರಿಸ್ಥಿತಿ ಬೆಳಗಾವಿಯಲ್ಲಿ ಎದುರಾಯಿತು.

ಬೆಳಗಾವಿ ಬಸ್ ನಿಲ್ಧಾಣದಲ್ಲಿ ಸಾರಿಗೆ ನೌಕರರು ಮತ್ತೆ ಭಜನೆ ಶುರು ಮಾಡಿದ್ದು ಹೋರಾಟ ಮುಂದುವರಿಸಿದ್ದಾರೆ.

 

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *