Breaking News

ಗೋಕಾಕಿನಲ್ಲಿ ಶಿವಲಿಂಗ ಮೂರ್ತಿಯ ಮಹಿಮೆ….!!!

ಬೆಳಗಾವಿ-ಶಿವಲಿಂಗ ಮೂರ್ತಿ ಕಣ್ಣು ತೆರೆದಿದೆ ಎಂದು ನೂರಾರು ಸಂಖ್ಯೆಯಲ್ಲಿ ಭಕ್ತವೃಂದ ಸೇರಿ ವಿಶೇಷ ಪೂಜೆ ನೆರವೇರಿಸುವ ಘಟನೆ ಕರದಂಟಿನ ನಗರಿ ಗೋಕಾಕಿನಲ್ಲಿ ನಡೆದಿದೆ.

ಗೋಕಾಕ್‌‌ನ ಬಣಗಾರ ಗಲ್ಲಿಯಲ್ಲಿನ ಶಂಕರಲಿಂಗ ದೇವಸ್ಥಾನದಲ್ಲಿ ಶಿವಲಿಂಗ ಮೂರ್ತಿ ಕಣ್ಣು ತೆರೆದಿದೆ ಎಂದು ಭಕ್ತರು ಸೇರಿದ್ದಾರೆ.

ಕಲ್ಲಿನ ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಮೂಡಿದೆ ಎಂದು ಅರ್ಚಕ, ಭಕ್ತರು ಹೇಳುತ್ತಿದ್ದು,ಇದನ್ನ ನೋಡಲು ಶಂಕರಲಿಂಗ ದೇವಸ್ಥಾನಕ್ಕೆ ತಂಡೋಪತಂಡವಾಗಿ ಭಕ್ತರು ಬರುತ್ತಿದ್ದಾರೆ.

ಇಂದು ರಾತ್ರಿ ಸಂಕಷ್ಟಿ ಚಂದ್ರೋದಯ ಸಮಯದಲ್ಲಿ ಕಲ್ಲಿನ ಮೂರ್ತಿಯಲ್ಲಿ ಕಣ್ಣು ಮೂಡಿದೆ ಎನ್ನುತ್ತಿರುವ ಭಕ್ತರು,ಇದು ಶುಭಸಂದೇಶವಾಗಿದ್ದು ಜಗತ್ತಿನಲ್ಲಿರುವ ರೋಗರುಜಿನ ಹೋಗುತ್ತೆ ಎನ್ನುತ್ತಾರೆ ಅರ್ಚಕರು.

ಹಿಂದೆ 2004ರಲ್ಲಿಯೂ ಇದೇ ರೀತಿ ಕಣ್ಣುಗಳು ಪ್ರತ್ಯಕ್ಷವಾಗಿದ್ದವು,ಆವಾಗ ಡೆಂಗ್ಯು ರೋಗ ಜೋರಾಗಿತ್ತು.ಶಿವಲಿಂಗ ಕಣ್ಣುತೆರೆದ ನಂತರ ಡೆಂಗ್ಯು ಹಾವಳಿ ಮಾಯವಾಗಿತ್ತು ಅನ್ನೋದು,ಭಕ್ತರ ನಂಬಿಕೆ,ಈಗ ಕೊರೋನಾ ಸಂಧರ್ಭದಲ್ಲಿ ಶಿವಲಿಂಗ ಕಣ್ಣು ತೆರದಿದ್ದು,ಮಹಾಮಾರಿ ಮಾಯವಾಗುತ್ತದೆ ಎನ್ನುವದು ಭಕ್ತರ ನಂಬಿಕೆ ಆಗಿದೆ.

Check Also

ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ …

Leave a Reply

Your email address will not be published. Required fields are marked *