Breaking News

ಗೋಕಾಕಿನಲ್ಲಿ ಶಿವಲಿಂಗ ಮೂರ್ತಿಯ ಮಹಿಮೆ….!!!

ಬೆಳಗಾವಿ-ಶಿವಲಿಂಗ ಮೂರ್ತಿ ಕಣ್ಣು ತೆರೆದಿದೆ ಎಂದು ನೂರಾರು ಸಂಖ್ಯೆಯಲ್ಲಿ ಭಕ್ತವೃಂದ ಸೇರಿ ವಿಶೇಷ ಪೂಜೆ ನೆರವೇರಿಸುವ ಘಟನೆ ಕರದಂಟಿನ ನಗರಿ ಗೋಕಾಕಿನಲ್ಲಿ ನಡೆದಿದೆ.

ಗೋಕಾಕ್‌‌ನ ಬಣಗಾರ ಗಲ್ಲಿಯಲ್ಲಿನ ಶಂಕರಲಿಂಗ ದೇವಸ್ಥಾನದಲ್ಲಿ ಶಿವಲಿಂಗ ಮೂರ್ತಿ ಕಣ್ಣು ತೆರೆದಿದೆ ಎಂದು ಭಕ್ತರು ಸೇರಿದ್ದಾರೆ.

ಕಲ್ಲಿನ ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಮೂಡಿದೆ ಎಂದು ಅರ್ಚಕ, ಭಕ್ತರು ಹೇಳುತ್ತಿದ್ದು,ಇದನ್ನ ನೋಡಲು ಶಂಕರಲಿಂಗ ದೇವಸ್ಥಾನಕ್ಕೆ ತಂಡೋಪತಂಡವಾಗಿ ಭಕ್ತರು ಬರುತ್ತಿದ್ದಾರೆ.

ಇಂದು ರಾತ್ರಿ ಸಂಕಷ್ಟಿ ಚಂದ್ರೋದಯ ಸಮಯದಲ್ಲಿ ಕಲ್ಲಿನ ಮೂರ್ತಿಯಲ್ಲಿ ಕಣ್ಣು ಮೂಡಿದೆ ಎನ್ನುತ್ತಿರುವ ಭಕ್ತರು,ಇದು ಶುಭಸಂದೇಶವಾಗಿದ್ದು ಜಗತ್ತಿನಲ್ಲಿರುವ ರೋಗರುಜಿನ ಹೋಗುತ್ತೆ ಎನ್ನುತ್ತಾರೆ ಅರ್ಚಕರು.

ಹಿಂದೆ 2004ರಲ್ಲಿಯೂ ಇದೇ ರೀತಿ ಕಣ್ಣುಗಳು ಪ್ರತ್ಯಕ್ಷವಾಗಿದ್ದವು,ಆವಾಗ ಡೆಂಗ್ಯು ರೋಗ ಜೋರಾಗಿತ್ತು.ಶಿವಲಿಂಗ ಕಣ್ಣುತೆರೆದ ನಂತರ ಡೆಂಗ್ಯು ಹಾವಳಿ ಮಾಯವಾಗಿತ್ತು ಅನ್ನೋದು,ಭಕ್ತರ ನಂಬಿಕೆ,ಈಗ ಕೊರೋನಾ ಸಂಧರ್ಭದಲ್ಲಿ ಶಿವಲಿಂಗ ಕಣ್ಣು ತೆರದಿದ್ದು,ಮಹಾಮಾರಿ ಮಾಯವಾಗುತ್ತದೆ ಎನ್ನುವದು ಭಕ್ತರ ನಂಬಿಕೆ ಆಗಿದೆ.

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *