ಇಸ್ಪೀಟ್ ಆಡುವಾಗ ಪೋಲೀಸ್ರು ಬಂದ್ರು ಅಂತಾ ನದಿಗೆ ಜಂಪ್ ಮಾಡಿದ ಇಬ್ಬರು ನಾಪತ್ತೆ…

ಬೆಳಗಾವಿ-ಪೊಲೀಸರಿಗೆ ಹೆದರಿ ನದಿ ಹಾರಿದ ಇಬ್ಬರು ಯುವಕರು ನಾಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ಹೊರ ವಲಯದ ಮಲಪ್ರಭಾ ನದಿಯಲ್ಲಿ ನಡೆದಿದೆ.

ನಿನ್ನೆ ಸಂಜೆ ನದಿ ತಟದಲ್ಲಿ ಕೆಲವರು ಇಸ್ಪೀಟ್ ಆಡುತ್ತಿದ್ದರು, ಆಗ ಯಾರೋ ಪೊಲೀಸರ ಬಂದ್ರು ಅಂತಾ ಕೂಗಿದ್ದಾರೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಆರು ಜನರು ನದಿಗೆ ಹಾರಿದ್ದಾರೆ ಈ ಆರು ಜನರಲ್ಲಿ ನಾಲ್ವರು ದಡ ಸೇರಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ.

ಆರು ಜನರಲ್ಲಿ ಮಂಜು ಬಂಡಿವಡ್ಡರ 30 ವಯಸ್ಸು, ಸಮೀರ ಬಟಕುರ್ತಿ 22 ವಯಸ್ಸು ನಾಪತ್ತೆಯಾದ ಯುವಕರಾಗಿದ್ದಾರೆ.ವನದಿಗೆ ಹಾರಿದ 6 ಜನರಲ್ಲಿ ನಾಲ್ವರಲ್ಲಿ ಪಾರಾಗಿದ್ದಾರೆ, ಸದ್ಯ ನಾಪತ್ತೆಯಾದ ಯುವಕರನ್ನ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ.

ಈವರೆಗೂ ನಾಪತ್ತೆಯಾದವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ,ಬೆಳಗಾವಿ ಜಿಲ್ಲೆಯ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ಸಂಭವಿಸಿದೆ.

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *