Breaking News

ಅಧಿಕಾರಿಗಳ ನಿರ್ಲಕ್ಷ್ಯ ಟಿಸಿ ಮೇಲೇ ಪ್ರಾಣ ಬಿಟ್ಟ ಲೈನ್ ಮನ್.

ಬೆಳಗಾವಿ- ಕಿತ್ತೂರು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಲೈನಮನ್ ಸಾವನ್ನಪ್ಪಿದ ಘಟನೆ

ಕಿತ್ತೂರು ತಾಲೂಕಿನ ಬೈಲೂರ ಗ್ರಾಮದಲ್ಲಿ ನಡೆದಿದೆ

ಈರಣ್ಣ ತಿಗಡಿ( ೨೭) ಟಿಸಿ ಮೇಲೆ ಸಾವನ್ನಪ್ಪಿದ ಲೈನಮನ್ ಆಗಿದ್ದು ಕಿತ್ತೂರಿನ ತಿಗಡೊಳ್ಳಿ ಮತ್ತು ತೆಗೂರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ

ಟಾನ್ಸ್ ಪಾರ್ಮರ್ ( ಟಿಸಿ) ಏರಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಹಾಕಿದ ಹೆಸ್ಕಾಂ ಅಧಿಕಾರಿಗಳು ಅಮಾಯಕನ ಸಾವಿಗೆ ಕಾರಣರಾಗಿದ್ದಾರೆ

ಬೆಳಿಗ್ಗೆ ಟಿಸಿ ಏರಿ ಕೆಲಸಾ ಮಾಡುವುದಕ್ಕೆ ಮುನ್ನ ಲೈನ್ ಮನ್ ಎಲ್ ಸಿ ತೆಗೆದುಕೊಂಡಿದ್ದ ಎಂದು ಹೇಳಾಗುತ್ತಿದೆ ಲೈನಮನ್ ಟಿಸಿ ಏರಿ ಕೆಲಸ ಮಾಡುವಾಗ ಅವಘಡ ಸಂಭವಿಸಿದೆ

ಆದ್ರೆ ಕೆ ಇ ಬಿ ಅಧಿಕಾರಿಗಳು, ಟಿ ಸಿ ಏರಿದ ಲೈನಮನ್ ಗಮನಕ್ಕೆ ತಾರದೆ ಟಿಸಿ ಏರಿದ್ದಾರೆ ಎಂದು ಆರೋಪ ಮಾಡಿದ್ದು ಕಿತ್ತೂರಿನ ಹೆಸ್ಕಾಮನಲ್ಲಿ ಕೆಲಸ ಮಾಡುತ್ತಿದ್ದ ಲೈನಮನ್ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ

ಘಟನೆ ನಡೆದು ಎರಡು ಘಂಟೆಗೆ ಕಳೆದರೂ ಸ್ಥಳಕ್ಕೆ ಬಾರದ ಕಿತ್ತೂರು ಕೆ ಇ ಬಿ ಅಧಿಕಾರಿಗಳು ಕೆ ಇ ಬಿ ಅಧಿಕಾರಿಗಳ ನಿರ್ಲಕ್ಷಕ್ಕೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ

ಕಿತ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *