Breaking News

ಶಿವಸೇನೆಯ ಸಂಜಯ ರಾವತ 14 ರಂದು ಬೆಳಗಾವಿಗೆ

ಬೆಳಗಾವಿ-ಗಡಿಭಾಗದ ಬೆಳಗಾವಿಯಲ್ಲಿ ಸಮಾಧಿಯಾಗಿರುವ ಮಹಾರಾಷ್ಟ್ರ ಏಕೀಕರಣ ಸಮೀತಿಗೆ,ಜೀವ ತುಂಬಲು ಶಿವಸೇನೆಯ ಸಂಜಯ ರಾವತ 14 ರಂದು ಬೆಳಗಾವಿಗೆ ಬರುತ್ತಿದ್ದಾರೆ.

ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಎಂಈಎಸ್ ಮತ್ತು ಶಿವಸೇನೆಯ ಮೈತ್ರಿ ಅಭ್ಯರ್ಥಿ ಶುಭಂ ಶಿಳಕೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ,ಅವರ ಪರ ಪ್ರಚಾರ ಮಾಡಲು ಸ್ವತಹ ನಾನು 14 ರಂದು ಬೆಳಗಾವಿಗೆ ಹೋಗುತ್ತಿದ್ದೇನೆ ಎಂದು ಸಂಜಯ ರಾವತ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವಿದೆ.ಶಿವಸೇನೆಯ ಸಂಜಯ ರಾವತ ಯಾರ ವಿರುದ್ಧ ಸೇಡು ತೀರಿಸಿಕೊಳ್ಳಲು ಬೆಳಗಾವಿಗೆ ಬರುತ್ತಿದ್ದಾರೆ ಅನ್ನೋದು ಈಗ ಚರ್ಚೆಯ ವಿಷಯವಾಗಿದೆ.

ಲೋಕಸಭಾ ಉಪ ಚುನಾವಣೆಯಲ್ಲಿ ಎಂಈಎಸ್ ಅಭ್ಯರ್ಥಿ ಶುಭಂ ಶಿಳಕೆ, ಚಂದಾ ವಸೂಲಿ ಮಾಡುತ್ತಿದ್ದು ಈಗ ಶಿವಸೆನೆಯ ಮುಖಂಡ ಸಂಜಯ ರಾವತ ಬೆಳಗಾವಿಗೆ ಆಗಮಿಸಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿ ಮುಗ್ದ ಮರಾಠಿಗರನ್ನು ಪ್ರಚೋದಿಸುವ ಮೂಲಕ ಬಹುತೇಕ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ತಂತ್ರ ರೂಪಿಸಿರಬಹುದು ಅನ್ನೋದು ಎಲ್ಲರ ಲೆಕ್ಕಾಚಾರ ವಾಗಿದೆ.

Check Also

ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

ಬೆಳಗಾವಿ-ಬೆಳಗಾವಿಯಲ್ಲಿ ಅಪ್ರಾಪ್ತ ಬಾಲಕಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ,ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳಗಾವಿ ಮಹಾನಗರದಲ್ಲಿ …

Leave a Reply

Your email address will not be published. Required fields are marked *