Breaking News

ಬೆಳಗಾವಿ ಬುಡಾಗೆ ಸಂಜಯ ಬೆಳಗಾಂವಕರ, ಯಡಿಯೂರಪ್ಪ ಆಪ್ತ ಹೊಸಮನಿಗೆ ಶಾಕ್…!!!

ಬೆಳಗಾವಿ- ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಂಜಯ ಬೆಳಗಾಂವಕರ ಇಂದು ಮದ್ಯಾಹ್ನ ದಿಢೀರ್‌ ಅಧಿಕಾರ ಸ್ವೀಕರಿಸಿದ್ದಾರೆ.

ಬೆಳಗಾವಿ ಬುಡಾದಲ್ಲಿ ಘೂಳಪ್ಪ ಹೊಸಮನಿ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಬಿಜೆಪಿ ನಾಯಕರಲ್ಲಿ ಈ ಕುರಿತು ಒಮ್ಮತ ಕಾಣಲೇ ಇಲ್ಲ. ಘೂಳಪ್ಪ ಹೊಸಮನಿ ಸ್ಥಳೀಯ ಬಿಜೆಪಿ ನಾಯಕರನ್ನು ಓವರ್ ಟೇಕ್ ಮಾಡಿ ಬುಡಾ ಅಧ್ಯಕ್ಷರಾಗಿದ್ದಾರೆ, ಇವರು ಕೆಜೆಪಿಯಿಂದ ಬಿಜೆಪಿಗೆ ಬಂದವರು ಪಕ್ಷದಲ್ಲಿ ಇವರಿಗಿಂತ ಹಿರಿಯರಿದ್ದಾರೆ.ಯಡಿಯೂರಪ್ಪ ಅವರ ಜೊತೆಗಿನ ವರ್ಚಸ್ಸಿನ ಮೇಲೆ ಅವರು ಬುಡಾ ಅಧ್ಯಕ್ಷರಾಗಿದ್ದಾರೆ ಎನ್ನುವ  ಆರೋಪವಿತ್ತು ಹೀಗಾಗಿ ಸ್ಥಳೀಯ ಬಿಜೆಪಿ ನಾಯಕರು,ಮತ್ತು ಶಾಸಕರು ಹೊಸಮನಿ ವಿರುದ್ಧ ಅಸಹಕಾರ ಚಳುವಳಿ ನಡೆಸಿದ್ದರು,ಘೂಳಪ್ಪ ಹೊಸಮನಿ ಅವರ ಅದ್ಯಕ್ಷತೆಯಲ್ಲಿ ನಡೆದ ಬುಡಾ ಸಭೆಗೆ ಬಿಜೆಪಿ ಶಾಸಕರು ಹಾಜರಾಗಲೇ ಇಲ್ಲ.ಯಾಕಂದ್ರೆ ಘೂಳಪ್ಪ ಹೊಸಮನಿ ಅವರು ಸ್ಥಳೀಯ ಶಾಸಕರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ ಅದಕ್ಕಾಗಿಯೇ ಅವರು ಬುಡಾ ಸ್ಥಾನದಿಂದ ನಿರ್ಗಮಿಸುವ ಪರಿಸ್ಥಿತಿ ಎದುರಾಯಿತು ಎಂದು ಹೇಳಲಾಗುತ್ತಿದೆ.

ಆದ್ರೆ ಇವತ್ತು ಏಕಾಏಕಿ ಮದ್ಯಾಹ್ನ ಬಿಜೆಪಿಯ ಹಿರಿಯ ಕಾರ್ಯಕರ್ತ ಸಂಜಯ ಬೆಳಗಾಂವಕರ ಅವರು ಮದ್ಯಾಹ್ನ ಬುಡಾ ಅಧ್ಯಕ್ಷರಾಗಿ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.

ಆಕಸ್ಮೀಕ ಬೆಳವಣಿಗೆಯಿಂದ ಬೆಳಗಾವಿ ಜಿಲ್ಲೆಯಲ್ಲಿರುವ ಯಡಿಯೂರಪ್ಪ ಅವರ ಖಾಸ್ ಅಭಿಮಾನಿಗಳಿಗೆ ಶಾಕ್ ಆಗಿದ್ದು ನಿರ್ಗಮಿತ ಬುಡಾ ಅಧ್ಯಕ್ಷ ಈಗ ಬೆಳಗಾವಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸುತ್ತಿದ್ದು ಇವರು ಯಾರ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಾರೆ ಅನ್ನೋದನ್ನು ಕಾದು ನೋಡಬೇಕು..

Check Also

ನಾಳೆ ಬೆಳಗಾವಿಯಲ್ಲಿ ಗಾಂಜಾವಾಲಾ, ಕೋಕೀಲಾ ಲೈವ್ ರಸಮಂಜರಿ….

ಕಿತ್ತೂರು ಉತ್ಸವ: ಅ.22 ರಂದು ಬೆಳಗಾವಿ ನಗರದಲ್ಲಿ ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ರಸಮಂಜರಿ ಬೆಳಗಾವಿ,-: ಕಿತ್ತೂರು ಉತ್ಸವ ಹಾಗೂ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.