ಬಸವರಾಜ ಖಾನಪ್ಪನವರ ಅವರಿಗೆ ಕನ್ನಡ ಸಂಘಟನೆಗಳ ಬೆಂಬಲ

ಬೆಳಗಾವಿ-ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಗೋಕಾಕದ ಕನ್ನಡ ಹೋರಾಟಗಾರ ಬಸವರಾಜ ಖಾನಪ್ಪನವರಅ ವರನ್ನು ಬೆಂಬಲಿಸಲು ಬೆಳಗಾವಿಯ ವಿವಿಧ ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ.

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರ ಖಾನಪ್ಪನವರ ಅವರು ಕನ್ನಡಪರ ಹೋರಾಟ ಮಾಡುತ್ತ ಬಂದಿದ್ದು ಅವರನ್ನು ಬೆಂಬಲಿಸಿ ಒಬ್ಬ ಹೋರಾಟಗಾರನಿಗೆ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು
ಕನ್ನಡ ಸಂಘಟನೆಗಳು ಕಸಾಪ ಮತದಾರರಲ್ಲಿ ಮನವಿ ಮಾಡಿವೆ.ಈಗಾಗಲೇ ಒಂದು ಅವಧಿಗಾಗಿ
ಸೇವೆ ಸಲ್ಲಿಸಿರುವ ಶ್ರೀಮತಿ ಮಂಗಲಾ
ಮೆಟಗುಡ್ಡ ಅವರು ಚುನಾವಣೆ
ಕಣದಿಂದ ಹಿಂದೆ ಸರಿದು ಖಾನಪ್ಪನವರ
ಅವರನ್ನು ಬೆಂಬಲಿಸಬೇಕೆಂದು ಕನ್ನಡ
ಸಂಘಟನೆಗಳು ಒತ್ತಾಯಿಸಿವೆ.

ಕರ್ನಾಟಕ ರಕ್ಷಣಾ
ವೇದಿಕೆಯ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷರಾಗಿರುವ ಖಾನಪ್ಪನವರ
ಅವರು ಕೇವಲ ಗಡಿಭಾಗದ
ಸಮಸ್ಯೆಗಳಿಗಾಗಿ ಮಾತ್ರವಲ್ಲ.ನೆರೆಯ
ಗೋವೆಯ ಕನ್ನಡಿಗರ ಹಿತರಕ್ಷಣೆಗಾಗಿಯೂ ಹೋರಾಟ ಮಾಡಿದ್ದಾರೆ.ಹೋರಾಟಗಾರ ಜೊತೆಗೆ ಸಾಹಿತ್ಯದ ಗಂಧ ಹೊಂದಿರುವ ಇವರನ್ನು ಗೆಲ್ಲಿಸುವಂತೆ ಕನ್ನಡಪರ ಹೋರಾಟಗಾರರು ಮನವಿ ಮಾಡಿದ್ದಾರೆ.

ಅಶೋಕ ಚಂದರಗಿ ,ದೀಪಕ ಗುಡಗನಟ್ಟಿ
ಬಾಬು ಸಂಗೋಡಿ,ಮಹಾದೇವ ತಳವಾರ
ಶಿವಪ್ಪ ಶಮರಂತ ಮೈನೋದ್ದೀನ್
ಮಕಾನದಾರ,ಶಂಕರ ಬಾಗೇವಾಡಿ
ಸುರೇಶ ಗವನ್ನವರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Check Also

ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ : ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆ

ಸಂಕೇಶ್ವರ : ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ ಗೊಂಡಿದ್ದ ಇಬ್ಬರು ಸಹೋದರರು ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ …

Leave a Reply

Your email address will not be published. Required fields are marked *