ಪೋಟೋ ಶೂಟ್ ಗೆ ಹೋದ ಯುವಕ ಸ್ಪಾಟ್ ಡೆತ್ತ್….!!!

ಬೆಳಗಾವಿ- ಪೋಟೋ ಶೂಟ್ ಯುವಕರ ಫ್ಯಾಶನ್ ಆಗಿಬಿಟ್ಟಿದೆ.ಯುವಕರಿಗೆ ಪುರಸೊತ್ತು ಸಿಗೋದಷ್ಟೆ ತಡ ಪೋಟೋ ಶೂಟ್ ಮಾಡಲು ತೆರಳುವದು ಬೆಳಗಾವಿ ಮಹಾನಗರದಲ್ಲಿ ಸಾಮಾನ್ಯವಾಗಿದೆ.

ಪೋಟೋ ಶೂಟ್ ಗೆ ಹೋಗಿದ್ದ ಯುವಕ,ಯುವತಿಯರ ಗುಂಪಿನ ಮೇಲೆ ಕಾರು ಹಾಯ್ದು ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟರೆ ಇನ್ನೋರ್ವ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಕಣಬರ್ಗಿಯ ಸಿದ್ದೇಶ್ವರ ಮಂದಿರದ ಬೆಟ್ಟದಲ್ಲಿ ನಡೆದಿದೆ.

ಸಿದ್ದೇಶ್ವರ ಮಂದಿರಕ್ಕೆ ಹೋಗುವ ದಾರಿಯಲ್ಲಿ ಹುಡುಗ ಹುಡುಗಿಯರು ಪೋಟೋ ಶೂಟ್ ಮಾಡುವಾಗ ವೇಗದಿಂದ ಆಗಮಿಸಿದ ಕಾರು ಹಾಯ್ದು ಬೆಳಗಾವಿಯ ಸದಾಶಿವ ನಗರದ,ಆದಿತ್ಯ ವಿಶ್ವನಾಥ ಕರಡಿ 19 ಎಂಬ ಯುವಕ ಸ್ಥಳದಲ್ಲಿ ಮೃತಪಟ್ಟರೆ,ಶಿಂಧೋಳಿ ಗ್ರಾಮದ ಮದನ್ ಮುತ್ತಪ್ಪ ಕಟ್ಟಿ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬೆಳಗಾವಿ ಉತ್ತರ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *