Breaking News

ಎರಡು ಟ್ರಕ್ ಗೊಬ್ಬರ ಕದ್ದವರು ಖಾಕಿ ಬಲೆಗೆ ಬಿದ್ದರು..!!

ಬೆಳಗಾವಿ: ತಾಲ್ಲೂಕಿನ ದೇಸೂರ ಗ್ರಾಮದ ರೈಲ್ವೆ ನಿಲ್ದಾಣ ಬಳಿ ಗೋದಾಮಿನಲ್ಲಿ ಕಳುವಾಗಿದ್ದ ಡಿಎಪಿ ರಸಗೊಬ್ಬರ ಚೀಲಗಳನ್ನು ಪತ್ತೆ ಹಚ್ಚಿರುವ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಬೆಳಗಾವಿ ತಾಲೂಕಿನ ಹಾಲಗಿಮರಡಿ ಗ್ರಾಮದ ನಾಗರಾಜ ಈರಣ್ಣ ಪಠಾತ(21), ಖಾನಾಪುರ ತಾಲೂಕಿನ ಲಕ್ಕೆಬೈಲ್ ಗ್ರಾಮದ ಪಂಡಿತ ಕಲ್ಲಪ್ಪ ಸನದಿ(37), ಮಂಜುನಾಥ ಸೋಮಪ್ಪ ಹಮ್ಮನ್ನವರ (30) ಹಾಗೂ ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದ ವಸಿಮ್ ಇಸ್ಮಾಯಿಲ್ ಮಕಾನದಾರ(23), ಹುದಲಿ ಗ್ರಾಮದ ಗಜಬರಲಿ ಗೌಸಮುದ್ದಿನ್ ಜಿಡ್ಡಿಮನಿ(39)ಎಂಬವರನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆ ನಡೆಸಿದ ಪೊಲೀಸರು 10.93 ಲಕ್ಷ ರೂ. ಮೌಲ್ಯದ ಆರ್‌ಸಿಎಫ್ ಕಂಪನಿಯ 810 ಡಿಎಪಿ ರಸಗೊಬ್ಬರ ಚೀಲಗಳೂ ಹಾಗೂ ಎರಡು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.

900 ಡಿಎಪಿ ರಸಗೊಬ್ಬರ ಚೀಲಗಳು ಕಳ್ಳತನ ಆಗಿರುವ ಬಗ್ಗೆ ಹೊನಗಾ ಗ್ರಾಮದ ಶಿವಾಜಿ ಬಾಳಾರಾಮ ಆನಂದಾಚೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದರು.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *