Breaking News

!‌ಮದ್ಯಪ್ರೀಯರಿಗೆ ನಾಳೆಯಿಂದ ಟೇನಶ್ಯನ್‌….

ಸರ್ಕಾರ ಮತ್ತು ಮದ್ಯ ಮಾರಾಟಗಾರರ ನಡುವಿನ ತಿಕ್ಕಾಟ ಮುಗಿಯುತ್ತಿಲ್ಲ.ಇ- ಇಂಡೆಂಟ್ ಸಮಸ್ಯೆ ಬಗೆ ಹರಿಸದಿದ್ದರೆ ನಾಳೆಯಿಂದ ವ್ಯಾಪಾರ ಬಂದ್ ಮಾಡುತ್ತೇವೆ ಎಂದು ಮಾರಾಟಗಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಚಿತ್ರದುರ್ಗ(ಜು.08): ಮದ್ಯ ಖರೀದಿಗೆ ಸಂಬಂಧಿಸಿ ಇ-ಇಂಡೆಂಟಿಗ್‌(ಬೇಡಿಕೆ) ವ್ಯವಸ್ಥೆಯಲ್ಲಿನ ಸಮಸ್ಯೆ ತಕ್ಷಣ ಬಗೆಹರಿಸದಿದ್ದರೆ ಶನಿವಾರದಿಂದ ರಾಜ್ಯಾದ್ಯಂತ ಮದ್ಯದಂಗಡಿ ಬಂದ್‌ ಮಾಡಲಾಗುವುದೆಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್‌.ಗುರುಸ್ವಾಮಿ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊಸ ಇ-ಇಂಡೆಂಟಿಂಗ್‌ ಸಾಫ್ಟ್‌ವೇರ್‌ನಿಂದಾಗಿ ಸಮಸ್ಯೆ ಉಲ್ಬಣವಾಗಿದೆ. ಮದ್ಯ ಖರೀದಿಗೆ ದಿನಗಟ್ಟಲೆ ಕಾಯವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಏಪ್ರಿಲ್‌ 4ರಿಂದ ಹೊಸ ಇ-ಇಂಡೆಂಟಿಂಗ್‌ ವ್ಯವಸ್ಥೆ ಜಾರಿಗೆ ಬಂದಿದ್ದರೂ ಉಂಟಾಗುತ್ತಿರುವ ಸಮಸ್ಯೆ ನಿವಾರಣೆಗೆ ಗಂಭೀರವಾಗಿ ಯತ್ನಿಸಿಲ್ಲವೆಂದು ದೂರಿದರು.

ಸಾಫ್ಟ್‌ವೇರ್‌ ದೋಷದಿಂದ ಸಿಗದ ಎಣ್ಣೆ: ಪರದಾಡಿದ ಮದ್ಯ ಪ್ರಿಯರು

ಇ-ಇಂಡೆಂಟ್‌ ಸಮಸ್ಯೆಯಿಂದಾಗಿ ಜುಲೈ 1ರಿಂದ ಮದ್ಯ ಖರೀದಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸರ್ಕಾರ ಬರೀ ತೆರಿಗೆ ಸಂಗ್ರಹ ಹಾಗೂ ಮದ್ಯ ಮಾರಾಟದ ಗುರಿ ಬಗ್ಗೆ ಮಾತನಾಡುತ್ತದೆಯೇ ವಿನಃ ಮದ್ಯ ಮಾರಾಟಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಆಲೋಚಿಸುತ್ತಿಲ್ಲ. ಮದ್ಯ ಖರೀದಿ ವ್ಯವಸ್ಥೆ ಸರಿಪಡಿಸದಿದ್ದರೆ ಶನಿವಾರದಿಂದ ಮದ್ಯದಂಗಡಿ ಬಂದ್‌ ಮಾಡುವುದು ಅನಿವಾರ್ಯವೆಂದು ಗುರುಸ್ವಾಮಿ ಹೇಳಿದರು.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *