Breaking News

16ರಂದು ರವಿವಾರ ಪೇಟೆ ಸಂಪೂರ್ಣ ಬಂದ್

ಆಹಾರ ಧಾನ್ಯಗಳಿಗೆ ಶೇ.5 GST ವಿಧಿಸಿರುವ ಕೇಂದ್ರ ಸರಕಾರದ ನಡೆಗೆ ಆಕ್ರೋಶ

ಬೆಳಗಾವಿ: ಆಹಾರ ಧಾನ್ಯ ಹಾಗೂ ಬೇಳೆಕಾಳುಗಳ ಮೇಲೆ ಕೇಂದ್ರ ಸರಕಾರ ಶೇ.5ರಷ್ಟು ಸೇವಾ ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಿರುವುದನ್ನು ಖಂಡಿಸಿ ನಗರದ ರವಿವಾರಪೇಟೆಯ ಎಲ್ಲ ವರ್ತಕರು ಜು.16ರಂದು ಒಂದು ದಿನ ಸಂಪೂರ್ಣ ವ್ಯಾಪಾರ-ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
‌‌ ಈಚೆಗೆ ಕೇಂದ್ರ ಸರಕಾರ ಆಹಾರ ಧಾನ್ಯಗಳು ಹಾಗೂ ಬೇಳೆಕಾಳು ವಹಿವಾಟು ಮೇಲೆ ತೆರಿಗೆ ವಿಧಿಸಿದ್ದು, ಇದರಿಂದ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರು ಹಾಗೂ ವರ್ತಕರಿಗೆ ತೊಂದರೆಯಾಗಲಿದೆ.
ಜಿಎಸ್ಟಿ ಕೌನ್ಸಿಲ್ ಕೂಡಲೇ ತನ್ನ ಆದೇಶ ಹಿಂಪಡೆಯಬೇಕೆಂದು ರವಿವಾರ ಪೇಟೆ ವರ್ತಕರ ಸಂಘ ಒತ್ತಾಯಿಸಿದೆ.

Check Also

ಹಿಂದೂಸ್ತಾನದ, ಆಪರೇಷನ್ ಸಿಂಧೂರ್ ದಾಳಿಯಿಂದ ಪಾಕಿಸ್ತಾನ ದಿವಾಳಿ….

:ನಿನ್ನೆಯಷ್ಟೇ ನಡೆದ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದಾಗಿ ಹೈರಾಣಾಗಿರುವ ಪಾಕಿಸ್ತಾನದಲ್ಲಿ ಇಂದು ಬೆಳಗ್ಗೆಯಿಂದ ಮತ್ತೆ ಸೈರನ್ ಮೊಳಗುತ್ತಿದ್ದು, ಲಾಹೋರ್ …

Leave a Reply

Your email address will not be published. Required fields are marked *