Breaking News

ಚಾಲಕನ ಹುಚ್ಚಾಟ, ಟಿಪ್ಪರ್ ಹಾಯ್ದು 54 ಕುರಿಗಳು ಖಲ್ಲಾಸ್….

ಬೆಳಗಾವಿ – ಚಾಲಕನ ನಿಯಂತ್ರಣ ತಪ್ಪಿ, ಟಿಪ್ಪರ್ ಹಾಯ್ದು ಬರೊಬ್ಬರಿ 54 ಕುರಿಗಳು ಬಲಿಯಾದ ಘಟನೆ ಹುಕ್ಕೇರಿ ತಾಲ್ಲೂಕಿನ ಅಮ್ಮನಗಿ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.

ಖಡಿ ಸಾಗಿಸುತ್ತಿದ್ದ ಟಿಪ್ಪರ್ ವಾಹನ ಚಾಲಕನ ಹುಚ್ಚಾಟದಿಂದ 54 ಕುರಿಗಳ ಮಾರಣಹೋಮ ನಡೆದಿದೆ.ಸ್ಥಳದಲ್ಲೇ 54 ಕುರಿಗಳು ಸಾವನ್ನೊಪ್ಪಿದ್ದು,ಹಲವಾರು ಕುರಿಗಳು ಗಾಯಗೊಂಡಿವೆ.ಅಮ್ಮನಗಿ- ಮುಗಳಿ ರಸ್ತೆಯಲ್ಲಿ ಈ ಘಟನೆ ನಡೆದಿದೆ‌.

ಈ ಅಪಘಾತ ಸಂಭವಿಸಿದ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *