ದಾವಣಗೇರೆಯ, ಸಿದ್ರಾಮೋತ್ಸವಕ್ಕೆ ಬೆಳಗಾವಿಯಿಂದ ವಿಶಿಷ್ಟ ಯಾತ್ರೆ….!!

ಬೆಳಗಾವಿ-ದಾವಣಗೇರಿಯಲ್ಲಿ ಅಗಸ್ಟ್ 3 ರಂದು ನಡೆಯುತ್ತಿರುವ ಮಾಜಿ ಸಿಎಂ ಸಿದ್ರಾಮಯ್ಯನವರ ಜನ್ಮೋತ್ಸವಕ್ಕೆ ಬೆಳಗಾವಿಯ ಅನೇಕ ಜನ ಸಿದ್ರಾಮಯ್ಯ ಅಭಿಮಾನಿಗಳು ವಿಶಿಷ್ಟ ಪ್ರಯಾಣ ಬೆಳೆಸಿದ್ದಾರೆ.

ಸಿದ್ರಾಮಯ್ಯನವರ ಅಪ್ಪಟ ಅಭಿಮಾನಿ,ಯಮಕನಮರಡಿಯ ಕಾಂಗ್ರೆಸ್ ಕಾರ್ಯಕರ್ತ ಅರುಣ ರಾವಳ,ಆಕ್ಟೀವಾ ಬೈಕ್ ಗೆ ಬ್ಯಾನರ್ ಅಳವಡಿಸಿ,ಬೆಳಗಾವಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸುತ್ತಾಡಿ,ಇಂದು ಬೆಳಗ್ಗೆ ಬೆಳಗಾವಿಯ ಕಾಂಗ್ರೆಸ್ ಭವನದಿಂದ ದಾವಣಗೇರೆಗೆ ಪ್ರಯಾಣ ಬೆಳೆಸಿದ್ದಾರೆ.

ಅಥಣಿ ತಾಲ್ಲೂಕಿನ ಮೂಳೆ ಗ್ರಾಮದ ಸಂತೋಷ ತೋರ್ಮಾಳೆ, ಮೂಳೆ ಗ್ರಾಮದಿಂದ ದಾವಣಗೇರೆ ವರೆಗೆ ಪಾದಯಾತ್ರೆ ನಡೆಸಿದ್ದು ಸಂತೋಷ ಇವತ್ತು ಹಾವೇರಿ ತಲುಪಿದ್ದಾನೆ.

ಬೆಳಗಾವಿಯಿಂದ ದಾವಣಗೇರೆಗೆ ಸಾವಿರಾರು ಜನ ಸಿದ್ರಾಮಯ್ಯ ಅಭಿಮಾನಿಗಳು ಪಾಲ್ಗೊಳ್ಳಲಿದ್ದು,ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಜಿಲ್ಲೆಯ ಇತರ ಕಾಂಗ್ರೆಸ್ ನಾಯಕರು,ಶಾಸಕರು,ಮಾಜಿ ಶಾಸಕರು,ಕಾಂಗ್ರೆಸ್ ಪದಾಧಿಕಾರಿಗಳು ಬೆಳಗಾವಿ ಜಿಲ್ಲೆಯಿಂದ ಅತೀ ಹೆಚ್ವು ಜನರನ್ನು ದಾವಣಗೇರೆಗೆ ಕರೆದುಕೊಂಡು ಹೋಗಲು,ನೂರಾರು ವಾಹನಗಳ ವ್ಯವಸ್ಥೆ ಮಾಡಿದ್ದಾರೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *