ಬೆಳಗಾವಿ- ಮೂಡಲಗಿ, ಬೆಳಗಾವಿ,ಚಂದೂರುಟೇಕ್,ಕಾಗವಾಡ ಆಯ್ತು,ಈಗ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲೂ ಸಹ ಚಿರತೆ ದಾಳಿ ನಡೆಸಿದೆ.
ಬೆಳಗಾವಿ ಮಹಾನಗರದಲ್ಲಿ ಚಿರತೆ ಪತ್ತೆಗೆ ಆನೆ ಕಾರ್ಯಾಚರಣೆ ನಡೆಯುತ್ತಿದ್ದರೆ.ಅತ್ತ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದಲ್ಲಿ ಚಿರತೆಎಮ್ಮೆಯ ಕರುವಿನ ಮೇಲೆ ದಾಳಿ ಮಾಡಿ ಪರಾರಿಯಾಗಿದೆ.
ಇಂಗಳಿ ಗ್ರಾಮದ ಕೃಷ್ಣಾ ಜಾಧವ್ ಎಂಬ ರೈತನಿಗೆ ಸೇರಿದ ಎಮ್ಮೆ ಕರು ಈಗ ಚಿರತೆ ದಾಳಿಗೆ ಬಲಿಯಾಗಿದೆ.ರಾತೋರಾತ್ರಿ ಎಮ್ಮೆ ಕರುವಿನ ಮೇಲೆ ದಾಳಿ ಮಾಡಿ ಪರಾರಿಯಾಗಿರುವ ಚಿರತೆ ಇಂಗಳಿ ಗ್ರಾಮದಲ್ಲಿ ಭಯ ಹುಟ್ಟಿಸಿದೆ.
ಚಿರತೆ ದಾಳಿ ಮಾಡಿದೆ ಎಂದು ಆತಂಕದಲ್ಲಿರುವ ಇಂಗಳಿ ಗ್ರಾಮದ ಜನ,ಕೂಡಲೇ ಚಿರತೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ