ಫೈನಾನ್ಸ್ ಲೂಟಿ ಮಾಡಿದ ದರೋಡೆಕೋರರು ಅರೆಸ್ಟ್..

ಬೆಳಗಾವಿ- ಚಿಕ್ಕೋಡಿ ಪಟ್ಟಣದಲ್ಲಿರುವ ಪಿನ್ ಕೇರ್ ಸ್ಮಾಲ್ ಫನೈನಾನ್ಸ ಬ್ಯಾಂಕಿನ ಕೀಲಿ ಮುರಿದು ರಾತ್ರೋ ರಾತ್ರಿ ಲಕ್ಷಾಂತರ ರೂ ಲೂಟಿ ಮಾಡಿದ ದರೋಡೆಕೋರರನ್ನು ಚಿಕ್ಕೋಡಿ ಪೋಲೀಸರು ಅರೆಸ್ಟ್ ಮಾಡಿದ್ದಾರೆ.

ಪಿನ್ ಕೇರ್ ಫೈನಾನ್ಸ್ ಸ್ಮಾಲ್ ಬ್ಯಾಂಕಿನ ಕೀಲಿ ಮುರಿದು ಸುಮಾರು ಆರು ಲಕ್ಷಕ್ಕೂ ಅಧಿಕ ಹಣವನ್ನು ಲೂಟಿ ಮಾಡಿ ಪರಾರಿಯಾಗಿದ್ದ ದರೋಡೆಕೋರರ ಜಾಲವನ್ನು ಚಿಕ್ಕೋಡಿ ಸಿಪಿಐ ಆರ್ ಆರ್ ಪಾಟೀಲ ಪತ್ತೆ ಮಾಡಿ ಲೂಟಿಕೋರರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಫೈನಾನ್ಸ್ ಬ್ಯಾಂಕ್ ಲೂಟಿ ಮಾಡಿದ ಆರೋಪದ ಮೇಲೆ, ರಮೇಶ ಕುಶನಪ್ಪ ನಾಯಿಕ ಬನಹಟ್ಟಿ,,ಪರಸಪ್ಪ ಅಮ್ಮಯ್ಯಗೋಳ,ಸಾ ನಾವಲಗಿ,ಬಸವರಾಜ ಉಮೇಶ್ ಕುಚನೂರ ಸಾ ಜಮಖಂಡಿ,ತುಕ್ಕಪ್ಪ ದುಂಡಪ್ಪ ಅಮ್ಮಯ್ಯಗೋಳ ಸಾ‌ನಾಲಗಿ ಎಂಬ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

Check Also

ಬೆಳಗಾವಿಯಲ್ಲಿ ಆಕಸ್ಮಿಕ ಕರೆಂಟ್ ಪವರ್ ಮ್ಯಾನ್ ಸಾವು.

ಬೆಳಗಾವಿ -ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ಬೊಪ್ಪಿದ್ದಾನೆ.ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾನ್ ಎಂದು ಗುರುತಿಸಲಾಗಿದೆ.ಬೆಳಗಾವಿಯ ಯಳ್ಳೂರು ಗ್ರಾಮದ …

Leave a Reply

Your email address will not be published. Required fields are marked *