Breaking News

ಧಮ್ ಇದ್ರೆ,ತಾಕತ್ತ್ ಇದ್ರೆ ನಮ್ಮ ಸಾಹುಕಾರ್ ಹೆಸರು ತೆಗೆ ಎಂದು ಸವಾಲು ಹಾಕಿದ ಮಹಿಳೆ….!!

ಬೆಳಗಾವಿ-ಇಂದು ಗೋಕಾಕ್ ನಲ್ಲಿ 2ಎ ಮೀಸಲಾತಿಗಾಗಿ ಲಿಂಗಾಯತ ಪಂಚಮಸಾಲಿ ಸಮಾವೇಶ ನಡೆಯುತ್ತಿದ್ದು,ಸಮಾವೇಶಕ್ಕೆ ಆಗಮಿಸುತ್ತಿರುವ ಯತ್ನಾಳ್‌ಗೆ ಸತೀಶ್ ಜಾರಕಿಹೊಳಿ ಬೆಂಬಲಿಗರ ಎಚ್ಚರಿಕೆ ಸಂದೇಶ ರವಾನೆಯಾಗಿದೆ.

ಪಂಚಮಸಾಲಿ ಹೋರಾಟದ ಹೊರತುಪಡಿಸಿ ಸತೀಶ್ ಬಗ್ಗೆ ಮಾತನಾಡಿದ್ರೇ ಎಚ್ಚರಿಕೆ ಎಂದಿರುವ ಬೆಂಬಲಿಗರು,ಸತೀಶ್ ಜಾರಕಿಹೊಳಿ ಕುರಿತು ಮಾತನಾಡಿದ್ರೇ ವೇದಿಕೆಗೆ ನುಗ್ಗಿ ಹೊಡೆಯುವುದಾಗಿ ಎಚ್ಚರಿಕೆ ನೀಡಲಾಗಿದೆ.
ಮಾನಸಿಕ ಅಸ್ವಸ್ಥ ಯತ್ನಾಳ್ ಅಂದಿರುವ ಸತೀಶ್ ಬೆಂಬಲಿಗರು.ಯಡಿಯೂರಪ್ಪ ಬಗ್ಗೆ, ವಿಜಯೇಂದ್ರ ಬಗ್ಗೆ ಮಾತನಾಡಿದ ಹಾಗೇ.ಇಲ್ಲಿ ಎನಾದ್ರೂ ಗೋಕಾಕ್ ದಲ್ಲಿ ನಾಟಕ ಹಚ್ಚಿದ್ರೇ ಗೋಕಾಕ್ ಬಿಟ್ಟು ಹೋಗುವುದು ಕಠಿಣ ಆಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ.

2ಎ ಮೀಸಲಾತಿಗೆ ನಮ್ಮದು ಸಂಪೂರ್ಣ ಬೆಂಬಲ ಇದೆ.
ನೀನು ಬಂದೀಯಾ ಪುಟ್ಟ ಹೋದಿಯಾ ಪುಟ್ಟ ಅಷ್ಟೇ ಇರಬೇಕು.ಅದನ್ನ ಬಿಟ್ಟು ಮಾತನಾಡಿದ್ರೇ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ.ನಮ್ಮ ಸಾಹುಕಾರ್ ಹೆಸರು ವೇದಿಕೆ ಮೇಲೆ ತೆಗೆದ್ರೇ ಇದು ನಿನಗೆ ಓಪನ್ ಚಾಲೆಂಜ್ ಎಂದು ಮಹಿಳೆಯೊಬ್ಬಳು ಘಟಪ್ರಭಾದಲ್ಲಿ ಸವಾಲು ಹಾಕಿದ್ದಾಳೆ.

*ಧಮ್ ಇದ್ರೇ, ತಾಕತ್ ಇದ್ರೇ ನಮ್ಮ ಸಾಹುಕಾರ್ ಹೆಸರು ವೇದಿಕೆಯಲ್ಲಿ ತೆಗೆ ಆಮೇಲೆ ಇದೆ ನಿನಗೆ ಎಂದು
ಯತ್ನಾಳ್‌ಗೆ ನೇರವಾಗಿ ಚಾಲೆಂಜ್ ಹಾಕಿರುವ ಸತೀಶ್ ಜಾರಕಿಹೊಳಿ ಬೆಂಬಲಿಗ ಮಹಿಳೆಯೊಬ್ಬಳು ಓಪನ್ ಚಾಲೇಂಜ್ ಮಾಡಿದ್ದಾಳೆ.

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *