ನಿನ್ನೆ ರಾತ್ರಿ ಬೆಳಗಾವಿಯಲ್ಲಿ ಡಬಲ್ ಮರ್ಡರ್…

ಬೆಳಗಾವಿ-ಬೆಳಗಾವಿ ಪಕ್ಕದ ಸಿಂದೊಳ್ಳಿ ಗ್ರಾಮದಲ್ಲಿ ಇಬ್ಬರು ಯುವಕರನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.ಮಾರಿಹಾಳ ಪೋಲೀಸ್ರು ನಿನ್ನೆ ರಾತ್ರಿ 11-00 ಗಂಟೆಗೆ, ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡು ಎಸ್ಕಾಟ್ ಮಾಡುವ ಹೊತ್ತಿನಲ್ಲಿಯೇ ಸಾಂಬ್ರಾ ಪಕ್ಕದ ಮಾರಿಹಾಳದಲ್ಲಿ ಡಬಲ್ ಮರ್ಡರ್ ಆಗಿದೆ.

ಸಿಂಧೊಳ್ಳಿಯಲ್ಲಿ ಇಬ್ಬರು ಯುವಕರನ್ನು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು ಇಪ್ಪತ್ತು ನಾಲ್ಕು ವರ್ಷದ ಯುವಕನೊಬ್ಬನ ಹತ್ಯೆಯಾಗಿದ್ದು ಇನ್ನೋರ್ವ ಯುವಕನ ಸ್ಥಿತಿ ಚಿಂತಾಜನಕವಾಗಿತ್ತು ನಿನ್ನೆ ಮಧ್ಯರಾತ್ರಿ ಆತನೂ ಪ್ರಾಣಬಿಟ್ಟಿದ ಘಟನೆ ನಡೆದಿದೆ.

ಬಸವರಾಜ್ ಬೆಳಗಾಂವಕರ 24 ಎಂಬ ಯುವಕನ ಕೊಲೆಯಾಗಿದ್ದು ಗಿರೀಶ್ ನಾಗೂನವರ 24 ಎಂಬ ಯುವಕನ ಸ್ಣತಿ ಚಿಂತಾಜನಕವಾಗಿದೆ.ಹಲ್ಲೆಯಾದ ತಕ್ಷಣ ಇಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು. ಬಸವರಾಜ್ ಬೆಳಗಾಂವಕರ ಎಂಬಾತ ಮೃತಪಟ್ಟಿದ್ದ ಗಿರೀಶ್ ನಾಗೂನ್ನವರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾನೆ.

ಕೊಲೆಗೆ ವಾಹನದ ವ್ಯವಹಾರ, ವ್ಯಯಕ್ತಿಕ ದ್ವೇಷವೇ ಕಾರಣ ಎನ್ನಲಾಗುತ್ತಿದೆ. ಸಿಂದೊಳ್ಳಿ ಗ್ರಾಮದಲ್ಲಿ ಕ್ರಿಕೆಟ್ ಟೂರ್ನಾಮೆಂಟ್ ನಡೆಯುತ್ತಿದೆ.ಇಂದಿನ ಪಂದ್ಯಾವಳಿ ಮುಗಿದು ಜನ ಮನೆಗೆ ಮರಳುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.ಸ್ಥಳಕ್ಕೆ ದೌಡಾಯಿಸಿರುವ ಮಾರಿಹಾಳ ಪೋಲೀಸ್ರು ತನಿಖೆ ಶುರು ಮಾಡಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಬಿಗಿ ಪೋಲೀಸ್ ಸರ್ಪಗಾವಲಿದ್ದು ಸಿಧೊಳ್ಳಿಯಲ್ಲೂ ಪೋಲೀಸ್ ಬಂದೋವಸ್ರಿ ಮಾಡಲಾಗಿದೆ.ಹಿರಿಯ ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಶೀಲನೆ ನಡೆಸಿದ್ದಾರೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *