Breaking News
Home / Breaking News / ಸಂದಾನಕ್ಕೆ ಬಂದ ಬಿಜೆಪಿ ಜಿಲ್ಲಾಧ್ಯಕ್ಷ ನೇರ್ಲಿಯನ್ನು ಎಳೆದಾಡಿದ ಸವದಿ ಬೆಂಬಲಿಗರು!!

ಸಂದಾನಕ್ಕೆ ಬಂದ ಬಿಜೆಪಿ ಜಿಲ್ಲಾಧ್ಯಕ್ಷ ನೇರ್ಲಿಯನ್ನು ಎಳೆದಾಡಿದ ಸವದಿ ಬೆಂಬಲಿಗರು!!

ಬೆಳಗಾವಿ- ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ್ ನೇರ್ಲಿ ಹಾಗೂ ಕೆಲವು ಜನ ಆರ್ ಎಸ್ ಎಸ್ ಮುಖಂಡರು ಇಂದು ಬೆಳಗ್ಗೆ ಲಕ್ಷ್ಮಣ ಸವದಿ ಅವರ ಸಂಧಾನಕ್ಕೆ ಆಗಮಿಸಿದ್ದರು.ಬಿಜೆಪಿ ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿಕೊಳ್ಳಲು ಆಗಮಿಸಿದ ಬಿಜೆಪಿ ಸಂಧಾನಕಾರರನ್ನು ಸವದಿ ಬೆಂಬಲಿಗರು ತರಾಟೆಗೆ ತೆಗೆದುಕೊಂಡು ಎಳೆದಾಡಿದ ಘಟನೆ ಲಕ್ಷ್ಮಣ ಸವದಿ ಅವರ ಮನೆಯ ಅಂಗಳದಲ್ಲೇ ನಡೆದಿದೆ.

ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ರಾಜೇಶ್ ನೇರ್ಲಿ,ಹಾಗೂ ಉಳಿದ ಸಂಧಾನಕಾರರನ್ನು ಲಕ್ಷ್ಮಣ ಸವದಿ ಅವರು ಸತ್ಕರಿಸಿ ಗೌರವಿಸಿದರೂ ಸವದಿ ಅವರ ಬೆಂಬಲಿಗರು ರಾಜೇಶ್ ನೇರ್ಲಿಯವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು,ಎಳೆದಾಡಿದರು,ನಂತರ ಸವದಿ ಅವರೇ ನೇರ್ಲಿ ಹಾಗೂ ಇತರ ಸಂಧಾನಕಾರರನ್ನು ಕಾರು ಹತ್ತಿಸಿ ಕಳುಹಿಸಿದ ಘಟನೆ ನಡೆಯಿತು

ಕೆಲವು ಜನ ಸವದಿ ಬೆಂಬಲಿಗರು ಡಾ.ರಾಜೇಶ್ ನೇರ್ಲಿ ಅವರಿಗೆ ಬಿಜೆಪಿ ಪದಾಧಿಕಾರಿಗಳ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.ಇನ್ನು ಕೆಲವು ಜನ ಬೆಂಬಲಿಗರು ನಮ್ಮ ಸಾಹುಕಾರ್ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಟಿಕೆಟ್ ಯ್ಯಾಕೆ ಕೊಟ್ಟಿಲ್ಲ, ನೀವು ಸಂದಾನಕ್ಕೆ ಯ್ಯಾಕೆ ಬಂದಿದ್ದೀರಾ ಎಂದು ಸಂಧಾನಕಾರರನ್ನು ತರಾಟೆಗೆ ತೆಗೆದುಕೊಂಡ್ರು.

Check Also

ಕಾಂಗ್ರೆಸ್ ಪಾರ್ಟಿಯಲ್ಲೂ ಚಹಾ ಪೇ ಚರ್ಚಾ ವೀದೌಟ್ ಖರ್ಚಾ…!!!

ಬೆಳಗಾವಿ- ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇವತ್ತು ಬೆಳಗಾವಿಗೆ ಬಂದ್ರು ಇಲ್ಲಿಯ ಕಾಂಗ್ರೆಸ್ ಭವನದಲ್ಲಿ …

Leave a Reply

Your email address will not be published. Required fields are marked *