ಬೆಳಗಾವಿ ಪೆಟ್ರೋಲ್ ಬಂಕ್ ಗಳಲ್ಲಿ ಕ್ವಾಲಿಟಿ.ಕ್ವಾಂಟಿಟಿ..ಕಂಟ್ರೋಲ್ ಮಾಡಿ..!

 

ಬೆಳಗಾವಿ- ಬೆಳಗಾವಿ ನಗರದ ಹಾಗು ಜಿಲ್ಲೆಯ ಪೆಟ್ರೋಲ್ ಬಂಕ್ ಗಳಲ್ಲಿ ಕೊಟ್ಟ ಹಣಕ್ಕೆ ತಕ್ಕಂತೆ ಪೆಟ್ರೋಲ್ ಹಾಕದೇ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಬೆಳಗಾವಿಯ ನ್ಯಾಯವಾದಿಗಳು ಆರೋಪಿಸಿದ್ದಾರೆ
ನಗರದಲ್ಲಿ ಪ್ರತಿಭಟನೆ ನಡೆಸಿದ ಬೆಳಗಾವಿಯ ಕೆಲವು ವಕೀಲರು ಪೆಟ್ರೋಲ್ ಬಂಕ್ ಗಳಲ್ಲಿ ನಡೆಯುತ್ತಿರುವ ವಂಚನೆ ತಪ್ಪಿಸಲು ವಿಶೇಷ ಪಡೆ ರಚಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು
ಬೆಳಗಾವಿ ನಗರದ ಪೆಟ್ರೋಲ್ ಬಂಕ್ ಗಳಲ್ಲಿ ಮೀಟರ್ ಜಂಪ್ ಮಾಡಲಾಗುತ್ತಿದೆ ಮೀಟರ್ ಗಳಲ್ಲಿ ಸೆಟ್ಟಿಂಗ್ ಮಾಡಿ ಗ್ರಾಹಕರನ್ನು ಸುಲಿಗೆ ಮಾಡಲಾಗುತ್ತಿದ್ದು ತೂಕ ಅಳತೆ ಮತ್ತು ಮಾಪನ ಇಲಾಖೆ ತನಿಖೆ ಮಾಡದೇ ಮಲಗಿಕೊಂಡಿದೆ ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದ್ರು

ನಗರದ ಹಾಗು ಜಿಲ್ಲೆಯ ಪೆಟ್ರೋಲ್ ಬಂಕ್ ಗಳ ಕ್ವಾಲಿಟಿ ಮತ್ತು ಕ್ವಾಂಟಿಟಿ ಚಕ್ ಮಾಡಲು ವಿಶೇಷ ತನಿಖಾ ದಳವನ್ನು ರಚಿಸಬೇಕು ಬಂಕ್ ಗಳಲ್ಲಿ ನಡೆಯುತ್ತಿರುವ ಮೋಸ ವಂಚನೆಯನ್ನು ತಡೆಯಬೇಕು ಎಂದು ನ್ಯಾಯವಾದಿಗಳು ಒತ್ತಾಯ ಮಾಡಿದ್ರು
ಪ್ರವೀಣ ರಂಗೋಲೆ,ಕೆಎಸ್ ನಾಯಕ,ಅಣ್ಣಾಸಾಬ ಘೋರ್ಪಡೆ ,ಬಿಪಿ ಜೇವಣಿ ,ಸೇರಿದಂತೆ ಹಲವಾರು ಜನ ನ್ಯಾಯವಾದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *