Breaking News

ಕಣ್ಣಿಗೆ ಕಾರದಪುಡಿ ಎರೆಚಿ 24 ಲಕ್ಷ ರೂ ದೋಚಿದ ಖದೀಮರು ಪೋಲೀಸರ ಬಲೆಗೆ..

ಬೆಳಗಾವಿ- ಡಿಸೆಂಬರ ನಾಲ್ಕರಂದು ಬೆಳಗಾವಿಯ ಸಾಗರ ಹೊಟೆಲ್ ಬಳಿ ತುಮಕೂರ ಮೂಲದ ಹೂವಿನ ವ್ಯಾಪಾರಿಯ ಕಣ್ಣಿಗೆ ಕಾರದಪುಡಿ ಎರೆಚಿ 24 ಲಕ್ಷ ರೂ ದೋಚಿ ಪರಾರಿಯಾಗಿದ್ದ ಖದೀಮರು ಈಗ ಸಿಸಿಐಬಿ ಪೋಲೀಸರ ಬಲೆಗೆ ಬಿದ್ದಿದ್ದಾರೆ

ಹುಕ್ಕೇರಿ ಮೂಲದ ಮೂರು ಜನ ಹೂವಿನ ವ್ಯಾಪಾರಿಗಳು ಕೂಡಿಕೊಂಡು ತಮಗೆ ಹೂವು ಸಪ್ಲಾಯ್ ಮಾಡುತ್ತಿದ್ದ ಮಾಲೀಕನ ಹಣ ದೋಚಿ ಈಗ ಪೋಲೀಸರ ಅತಿಥಿಯಾಗಿದ್ದಾರೆ

ಹುಕ್ಕೇರಿಯ ಅಸ್ಕರ ಅಲಿ ನಜೀರ ಅಹ್ಮದ ಮಕಾನದಾರ ಉಮೇಶ ತಮ್ಮಣ್ಣ ಬಸ್ತವಾಡೆ,ಯಲ್ಲೇಶ ಮತ್ತು ಶಶಿಕಾಂತ ಸೇರಿದಂತೆ ಒಟ್ಟು ನಾಲ್ಕು ಜನ ಆರೋಪಿಗಳನ್ನು ಬಂಧಿಸಿರುವ ಪೋಲೀಸರು ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಪ್ರಭಾರಿ ಪೋಲೀಸ್ ಆಯುಕ್ತ ರಾಮಚಂದ್ರ ರಾವ್ ಪ್ರಕರಣದ ಕುರಿತು ಮಾಹಿತಿ ನೀಡಿ ಸಿದಿಐಬಿ ಪೋಲೀಸರ ಕಾರ್ಯವನ್ನು ಶ್ಲಾಘಿಸಿದರು

ನಾಲ್ಕು ಜನ ಆರೋಪಗಳನ್ನು ಬಂಧಿಸಿರುವ ಪೋಲೀಸರು ಆರೋಪಿಗಳಿಂದ ಹನ್ನೆರಡು ಲಕ್ಷ ರೂ ವಶಪಡಿಸಿಕೊಂಡಿದ್ದಾರೆ

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.