Breaking News

ಹೊರಗೆ ಬಂದ್ರೆ ದ್ರೋಣ…. ರಸ್ತೆಗೆ ಬಂದ್ರೆ ಕೊರೋನಾ…. ಅದಕ್ಕೆಮನ್ಯಾಗ ಇರೋಣ…!!

ಹೊರಗೆ ಬಂದ್ರೆ ದ್ರೋಣ….
ರಸ್ತೆಗೆ ಬಂದ್ರೆ ಕೊರೋನಾ….
ಅದಕ್ಕೆಮನ್ಯಾಗ ಇರೋಣ…!!

ಬೆಳಗಾವಿ- ಬೆಳಗಾವಿ ನಗರ ಪೋಲೀಸ್ ಮನೆಯಿಂದ ಆಚೆಗೆ ಬಂದು ಗಲ್ಲಿಗಳಲ್ಲಿ ಹರಟೆ ಹೊಡೆಯುವವರ ಮೇಲೆ ನಿಗಾ ಇಡಲು ದ್ರೋಣ ಕ್ಯಾಮರಾಗಳನ್ನು ಉಪಯೋಗಿಸುತ್ತಿದೆ.

ಮಾಳ ಮಾರುತಿ ಠಾಣೆಯ ಪೋಲೀಸರು ದ್ರೋಣ ಕ್ಯಾಮರಾ ಗಳನ್ನು ಹಾರಿ ಬಿಟ್ಟು,ಗಾಂದೀ ನಗರ,ಉಜ್ವಲ ನಗರ,ಮಹಾಂತೇಶ ನಗರ ಸೇರಿದಂತೆ ಠಾಣಾ ವ್ಯಾಪ್ತಿಯ ಗಲ್ಲಿ,ಗಲ್ಲಿ ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ‌.

ದ್ರೋಣ ಕ್ಯಾಮರಾದ ದೃಶ್ಯಗಳನ್ನು ಆಧರಿಸಿ ಕಿಡಗೇಡಿಗಳ ಬೆನ್ನಟ್ಟಿ ರುವ ಮಾಳ ಮಾರುತಿ ಪೋಲೀಸರು , ತಂತ್ರಜ್ಞಾನದ ಸದಯಪಯೋಗ ಪಡೆದುಕೊಂಡು,ಕಟ್ಟು ನಿಟ್ಟಿನ ಲಾಕ್ ಡೌನ್ ಮಾಡುತ್ತಿದ್ದಾರೆ.

ದ್ರೋಣ ಕ್ಯಾಮರಾ ಆಧರಿಸಿ,ಅನವಶ್ಯಕವಾಗಿ ಸುತ್ತಾಡುವ,ಬೈಕ್ ಗಳನ್ನು ವಶಪಡಿಸಿಕೊಂಡಿರುವ ಮಾಳ ಮಾರುತಿ ಪೋಲೀಸರು.ಹಲವಾರು ಜನ ಕಿಡಗೇಡಿಗಳ ಬೆವರಿಳಿಸಿದ್ದಾರೆ.

ಗಾಂಧಿ ನಗರ,ಉಜ್ವಲ ನಗರ,ಕಣಬರ್ಗಿ ರಸ್ತೆ ಯಲ್ಲಿ ದ್ರೋಣ ಕ್ಯಾಮರಾಗಳು ಹಾರಾಟ ನಡೆಸಿರುವದರಿಂದ.ಕಿಡಗೇಡಿಗಳು ಮನೆ ಸೇರಿಕೊಂಡಿರುವದು ಸತ್ಯ….

ಅನಗತ್ಯವಾಗಿನೆಯಿಂದ ಹೊರಗಡೆ ಸುತ್ತಾಡದೇ ಸೇಫಾಗಿ ಮನೆಯಲ್ಲಿ ಇರೋಣ..ಹೊರಗೆ ಬಂದು ಸುತ್ತಾಡಿದ್ರೆ ಕೊರೋಣ….

ನಿಮ್ಮ ಜೀವ ನಿಮ್ಮ ಕೈಯಲ್ಲಿ ….

Check Also

ಇವರು ನೀಡಿದ ಚಿಕಿತ್ಸೆ ಅದ್ಭುತ , ಬೆಳಗಾವಿಯ ವ್ಯಕ್ತಿ ಇವರ ಔಷಧಿಯಿಂದ ಬದುಕಿದ್ದು ಪವಾಡ…!!

ನಾಟಿ ವೈದ್ಯ ಲೋಕೇಶ್ ಟೇಕಲ್ ಅವರು ನೀಡಿದ ಚಿಕಿತ್ಸೆ ನೋಡಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ …

Leave a Reply

Your email address will not be published. Required fields are marked *