ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಸಿಎಂ ಕುಮಾರಸ್ವಾಮಿ ಬದಲು ….ಕಬ್ಬು ತುಂಬಿದ ವಾಹನಗಳು ಹಾಜರ್….ಪ್ರತಿಭಟನೆ ಮಾಡಿದ ರೈತರು ಅಂದರ್ ..!!!!

ಬೆಳಗಾವಿ- ಸೋಮವಾರ ನಾಡಿನ ದೊರೆ ಕುಮಾರಸ್ವಾಮಿ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಬರಬೇಕಾಗಿತ್ತು ಅವರು ಬೆಳಗಾವಿ ಪ್ರವಾಸ ರದ್ದಾದ ಹಿನ್ನಲೆಯಲ್ಲಿ ಕುಮಾರಸ್ವಾಮಿ ಬದಲು ಕಬ್ಬು ತುಂಬಿದ ಲಾರಿಗಳು ಸುವರ್ಣ ಸೌಧದ ಅತಿಥಗಳಾಗಿವೆ

ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳ ಬೆಳಗಾವಿ ಪ್ರವಾಸ ರದ್ದಾಗುತ್ತಿದ್ದಂತೆಯೇ ಡಿಸಿ ಕಚೇರಿ ಎದುರು ಸಭೆ ಸೇರಿದ ರೈತ ನಾಯಕರು ಆಕ್ರೋಶ ವ್ಯೆಕ್ತಪಡಿಸಿ ಕಬ್ಬು ತುಂಬಿದ ಲಾರಿ,ಮತ್ತು ಟ್ರ್ಯಾಕ್ಟರ್ ಗಳನ್ನು ತಡೆದು ಸುವರ್ಣಸೌಧಕ್ಕೆ ನುಗ್ಗಿಸುವ ನಿರ್ಧಾರ ಕೈಗೊಂಡು ಹತ್ತು ಹಲವು ಕಬ್ಬು ತುಂಬಿದ ವಾಹನಗಳನ್ನು ರೈತ ನಾಯಕರು ಸುವರ್ಣ ವಿಧಾನಸೌಧಕ್ಕೆ ನುಗ್ಗಿಸಿದ್ದಾರೆ

ಸುವರ್ಣ ವಿಧಾನ ಸೌಧದಲ್ಲಿ ಕಬ್ಬು ತುಂಬಿದ ಲಾರಿಗಳನ್ನು ತಡೆದು ರೈತರು ಪ್ರತಿಭಟನೆ ನಡೆಸುವ ಸಂಧರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಪೋಲೀಸರು ರೈತರನ್ನು ಬಂಧಿಸಿದ್ದಾರೆ

ರೈತರ ಪ್ರತಿಭಟನೆಗೆ ಹೆದರಿ ಕಬ್ನು ತುಂಬಿದ ವಾಹನಗಳು ಹಿರೇಬಾಗೇವಾಡಿಯಲ್ಲಿ ನಿಂತುಕೊಂಡಿವೆ ಪೋಲೀಸರು ರೈತರ ಪ್ರತಿಭಟನೆಯ ಮೇಲೆ ನಿಗಾ ವಹಿಸಿದ್ದು ಪ್ರತಿಭಟನೆ ಮುಂದುವರೆದಿದೆ

ವರದಿ ಮಾಡಲು ತೆರಳಿದ ಮಾದ್ಯಮಗಳ ವಿರುದ್ಧ ಪೋಲೀಸ್ ಕಮೀಶ್ನರ್ ರಾಮಪ್ಪ ಹರಿಹಾಯ್ದ ಹಿನ್ನಲೆಯಲ್ಲಿ ಮಾದ್ಯಮ ಪ್ರತಿನಿಧಿಗಳು ಮತ್ತು ಪೋಲೀಸರ ನಡುವೆ ಮಾತಿನ ಚಕಮಕಿ ನಡೆಯಿತು ಪೋಲೀಸರ ವರ್ತನೆ ಖಂಡಿಸಿ ಮಾದ್ಯಮ ಪ್ರತಿನಿಧಿಗಳು ಸುವರ್ಣ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದರು

ಬಂಧನಕ್ಕೆ ಒಳಗಾಗಿರುವ ರೈತ ನಾಯಕರನ್ನು ಬೆಳಗಾವಿ ಗ್ರಾಮೀಣ ಠಾಣೆಗೆ ರವಾನಿಸಲಾಗಿದ್ದು ಎಲ್ಲರೂ ಅಲ್ಲಿಗೆ ದೌಡಾಯಿಸಿದ್ದಾರೆ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *