Breaking News
Home / Breaking News / ಕೋರೆಗೆ ಕ್ಯಾರೆ ಎನ್ನಲಿಲ್ಲ….ಕತ್ತಿಗೆ ಬಾರೆ ಎನ್ನಲಿಲ್ಲ……!!

ಕೋರೆಗೆ ಕ್ಯಾರೆ ಎನ್ನಲಿಲ್ಲ….ಕತ್ತಿಗೆ ಬಾರೆ ಎನ್ನಲಿಲ್ಲ……!!

ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕಾರಣವನ್ನು ಈ ರಾಜ್ಯದ ನಾಯಕರಿಗೆ ಅರ್ಥ ಆಗಿಲ್ಲ,ಆದ್ರೆ ದೆಹಲಿಯ ಬಿಜೆಪಿ ನಾಯಕರಿಗೆ ಬೆಳಗಾವಿ ಜಿಲ್ಲಾ ರಾಜಕಾರಣ ಸಂಪೂರ್ಣವಾಗಿ ಅರ್ಥವಾಗಿದೆ ಎನ್ನುವದಕ್ಕೆ,ರಾಜ್ಯಸಭಾ ಟಿಕೆಟ್ ಕುರಿತು ಇಂದು ಕೈಗೊಂಡ ನಿರ್ಧಾರವೇ ಅದಕ್ಕೆ ಸಾಕ್ಷಿಯಾಗಿದೆ.

ಇಂದು ಬಿಜೆಪಿ ಕೈಗೊಂಡ ನಿರ್ಧಾರ ಕಡಾಡಿಯವರ ಅದೃಷ್ಟವೂ ಜೊತೆಗೆ ರಾಜಕೀಯ ಜಾಣತನವೂ ಹೌದು.. ಒಬ್ಬ ಪ್ರಾಮಾಣಿಕ ಕಾರ್ಯಕರ್ತನಿಗೆ ಸಂದ ಗೌರವವೂ ಹೌದು.

ರಾಜ್ಯಸಭಾ ಟಿಕೆಟ್ ಕತ್ತಿ ಸಹೋದರರಿಗೆ ಬೇಕಾಗಿರಲಿಲ್ಲ,ಆದ್ರೆ ಪ್ರಭಾಕರ ಕೋರೆಗೆ ಟಿಕೆಟ್ ತಪ್ಪಿಸಲು ಕತ್ತಿಸಹೋದರರು ನಮಗೂ ಟಿಕೆಟ್ ಕೊಡಿ ಎನ್ನುವ ಬೇಡಿಕೆ ಮಂಡಿಸಿ ಪ್ರಭಾಕರ ಕೋರೆ ಕಾಲಾಗ ಹಾವು ಬಿಟ್ಟಿದ್ದರು.ಈ ವಿಷಯದಲ್ಲಿ ಕತ್ತಿಸಹೋದರರು ಸೋತರೂ ಅವರ ಉದ್ದೇಶ ಈಡೇರಿದೆ.

ರಾಜ್ಯಸಭಾ ಟೆಕೆಟ್ ಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ದಿಗ್ಗಜರ ನಡುವೆ ನಡೆದ ಕಿತ್ತಾಟವನ್ನು ಅತ್ಯಂತ ಸೂಕ್ಷ್ಮ ವಾಗಿ ಗಮನಿಸಿದ ಬಿಜೆಪಿ ಹೈಕಮಾಂಡ್ ಪ್ರಭಾಕರ ಕೋರೆಗೆ ಕ್ಯಾರೆ ಅನ್ನದೇ…..ಕತ್ತಿ ಸಹೋದರರಿಗೆ ಬಾರೆ ಎನ್ನದೇ ಪಕ್ಷದ ಶಿಸ್ತಿನ ಸಿಪಾಯಿ ಈರಣ್ಣಾ ಕಡಾಡಿ ಅವರ ಹೆಸರನ್ನು ರಾಜ್ಯಸಭೆಗೆ ಅಂತಿಮಗೊಳಿಸಿದ ಬಿಜೆಪಿ ಹೈಕಮಾಂಡ್ ಬೆಳಗಾವಿ ಜಿಲ್ಲೆಯ ದಿಗ್ಗಜರ ಕಿತ್ತಾಟಕ್ಕೆ ಬ್ರೇಕ್ ಹಾಕಿದೆ.

ಈರಣ್ಣಾ ಕಡಾಡಿ ಸಂಘಪರಿವಾರದ ಮೂಲಕ ರಾಜಕೀಯ ರಂಗಕ್ಕೆ ಕಾಲಿಟ್ಟು,ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಿ,ಯಾವುದೇ ಹುದ್ದೆಗೆ ಲಾಭಿ ಮಾಡದೇ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದರು.

ಈರಣ್ಣಾ ಕಡಾಡಿ ಅವರ ಸೇವೆಯನ್ನು ಗಮನಿಸಿದ ಬಿಜೆಪಿ ಹೈಕಮಾಂಡ್ ಯಾವ ಲಾಭಿಗೂ ಮಣಿಯದೇ ಪ್ರಾಮಾಣಿಕ ಕಾರ್ಯಕರ್ತನಿಗೆ ಬಂಪರ್ ಉಡುಗರೆ ನೀಡಿದೆ.

ಗೋಕಾಕ ತಾಲ್ಲೂಕಿಗೆ ಬಂಪರ್ ಮೇಲೆ ಬಂಪರ್…..

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕು ರಾಜ್ಯರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈ ತಾಲ್ಲೂಕಿನ ನಾಯಕರು ರಾಜ್ಯದ ಬಿಜೆಪಿ ನಾಯಕರ ಗಮನ ಸೆಳೆಯುವ ಜೊತೆಗೆ,ರಾಷ್ಟ್ರದ ಗಮನ ಸೆಳೆದಿದ್ದಾರೆ.

ಗೋಕಾಕಿನ ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ,ಬಿಜೆಪಿ ಸರ್ಕಾರವನ್ನು ರಚಿಸಿ,ಅದೇ ಸರ್ಕಾರದಲ್ಲಿ ಜಲಪನ್ಮೂಲ ಮಂತ್ರಿಯಾಗಿ,ನಂತರ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ರಾಷ್ಟ್ರದ ಗಮನ ಸೆಳೆದಿದ್ದರು.

ಗೋಕಾಕ್ ತಾಲ್ಲೂಕಿನ ಬಾಲಚಂದ್ರ ಜಾರಕಿಹೊಳಿ,ಕೆ.ಎಂ.ಎಫ್ ಅದ್ಯಕ್ಷರಾಗಿ ರಾಜ್ಯದ ಗಮನ ಸೆಳೆದಿದ್ದರು.

ಈಗ ಗೋಕಾಕ ತಾಲ್ಲೂಕಿನವರೇ ಆದ ಕಲ್ಲೊಳ್ಳಿ ಗ್ರಾಮದ ಈರಣ್ಣಾ ಕಡಾಡಿ ಅವರು ರಾಜ್ಯಸಭೆಯ ಟಿಕೆಟ್ ಗಿಟ್ಟಿಸಿಕೊಂಡು ಈಗ ಮತ್ತೊಮ್ಮೆ ರಾಷ್ಟ್ರದ ಗಮನ ಸೆಳೆದಿದ್ದಾರೆ.

ಕತ್ತಿ ಸಹೋದರರು,ಮತ್ತು ಪ್ರಭಾಕರ ಕೋರೆ ಅವರ ಮುಂದಿನ ನಡೆ ಏನು ? ಎನ್ನುವದನ್ನು ಕಾದು ನೋಡಬೇಕಾಗಿದೆ.

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *