ಮರವಣಿಗೆ,ಐತೇನ್ರೀ…ಡಾಲಬೀ ಬರತೈತಿ ಏನ್ರೀ….ನಾವೂ ಬೆಳಗಾವಿಗೆ ಬರಬಹುದೇನ್ರೀ….???

ಬೆಳಗಾವಿ- ಕೋವೀಡ್ ಹಿನ್ನಲೆಯಲ್ಲಿ ಈ ಬಾರಿ ಬೆಳಗಾವಿ ನಗರದಲ್ಲಿ ಮೆರವಣಿಗೆಯೂ ಇಲ್ಲ,ಡಾಲಬೀ ಸೌಂಡು ಇಲ್ಲ,ಡ್ಯಾನ್ಸೂ ಇಲ್ಲ, ಅಂತಾ ಹೋ ಕೊಂಡ್ರೂ ನಮ್ಮ ಹುಡುಗೋರು,ಫೋನ್ ಮಾಡಿ,ಬೆಳಗಾವಿ ಬಂದು ಚನ್ನಮ್ಮನ ಮೂರ್ತಿಗೆ ಹೂವಿನ ಹಾರ ಹಾಕಿ,ಹೋದ್ರ ನಡಿತೈತಿ ಏನ್ರೀ ಅಂತ ಫೋನ್ ಮಾಡಾಕ ಹತ್ಯಾರ…..

ರಾತ್ರಿ ಹನ್ನೆರಡ ಗಂಟೆಗೆ ಕೈಯ್ಯಾಗ ಝೇಂಡಾ ಹಿಡ್ಕೊಂಡ ಗಾಡಿ ಎಕ್ಸಿಲೇಟರ್ ತಿರವಿ ಜೈ..ಜೈ ಅಂತ ಕೂಗುತ್ತ ನಮ್ಮ ಹುಡುಗೋರ ,ಚನ್ನಮ್ಮ ಸರ್ಕಲ್ ಕಡೆ ಬರೋದನ್ನ ನೋಡಿದ್ರ,ಅಭಿಮಾನವನ್ನು ಯಾರೂ ಕಟ್ಟಿ ಹಾಕಾಕ ಸಾಧ್ಯವಿಲ್ಲಾ ಅಂತ ಗೊತ್ತಾತ ನೋಡ್ರೀ……

ರಾತ್ರಿ ಹನ್ನೆರಡ ಆದ್ರೂ ಜನ ಚನ್ನಮ್ಮ ಸರ್ಕಲ್ ಗೆ ಬರೋದೇನ,ಸೆಲ್ಫೀ ತೆಗಿಸಿಕೊಳ್ಳುವದೇನ,ಜೈ‌ಜೈ ಕರ್ನಾಟಕ ಅಂತಾ ಕೂಗುವದನ್ನು ನೋಡಿದ್ರ ಅಭಿಮಾನ ಉಕ್ಕಿ ಬರರೈತಿ ನೋಡ್ರಿಪಾ….

ಇವತ್ತ ಬೆಳಗಾವ್ಯಾಗ ಮೆರವಣಿಗೆಯೂ ಇಲ್ಲ, ಸಿಪಿಎಡ್ ಮೈದಾನದಾಗ ,ತಾಯಿ ಭುವನೇಶ್ವರಿ ದೇವಿಯ ಪೂಜಾ ಕಾರ್ಯಕ್ರಮ ಬಿಟ್ರ ಮತ್ತೇನೂ ಕಾರ್ಯಕ್ರಮ ಇರೋದಿಲ್ಲ,ಜನ ಸೇರೋದಿಲ್ಲ,ಅದಕ್ಕ ನಮ್ಮ ಹುಡುಗೋರ ಬೆಳಗಾವಿಗೆ ಬರಬ್ಯಾಡ್ರಿ ,ನಿಮ್ಮ ನಿಮ್ಮ ಊರಾಗ ರಾಜ್ಯೋತ್ಸವ ಆಚರಣೆ ಮಾಡ್ರಿ,ಮಹಾಮಾರಿ ರೋಗ ಹರಡಬಾರ್ದು ಅಂತಾ,ಈ ಸಲಾ, ಎಲ್ಲಾ ಕಾರ್ಯಕ್ರಮ ರದ್ದು ಮಾಡ್ಯಾರ,ಇದೊಂದ ವರ್ಷ ತಡ್ಕೊರ್ರಿ,ಮುಂದಿನ ವರ್ಷ ಮತ್ತ ಕುಣಿಯೋದ ಐತ ಐತೀ ಹೊಡಿ ಹಲಗೀ….

ಓಣ್ಯಾಗ ಝೇಂಡಾ ಹಚ್ಚಿ,ತಾಯಿ ಭುವನೇಶ್ವರಿ ಪೋಟೋ ಇಟ್ಟು,ಪೂಜಾ ಮಾಡಾಕ ನಮ್ಮ ಪೋಲೀಸ್ರು ಅಡ್ಡ ಬರಬಾರ್ದು,ಅದಕ್ಕೂ ಅವಕಾಶ ಕೊಡಲಿಲ್ಲ ಅಂದ್ರ ನಮ್ಮ ಹುಡುಗೋರು ಗಾಡಿ ಕಿಕ್ಕ ಹೊಡದ ಸೀದಾ ಬೆಳಗಾವಿಗೆ ಬರ್ತಾರ,ಅದಕ್ಕ ಅಲ್ಲಲ್ಲಿ ಓಣ್ಯಾಗ,ಊರಾಗ,ಸಿಂಪಲ್ ಆದ್ರೂ ಪರವಾಗಿಲ್ಲ,ಹಬ್ಬಾ ಮಾಡಾಕ ಕೋಡ್ರಿ,ಹುಡಗೋರ್ ಬೆಳಗಾವಿಗೆ ಬರದ್ಹಂಗ್ ಈ ಸಲಾ ಊರಾಗ ತಡೀರ್ರಿ….

ಯಾಕಂದ್ರ,ನಮ್ಮ ಹುಡುಗೋರ ಫೋನ್ ಮಾಡಿ.ಮರವಣಿಗೆ,ಐತೇನ್ರೀ…ಡಾಲಬೀ ಬರತೈತಿ ಏನ್ರೀ….ನಾವೂ ಬೆಳಗಾವಿಗೆ ಬರಬಹುದೇನ್ರೀ….???ಕೇಳಾಕ ಹತ್ಯಾರ…!!!

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *