ರಣಜಿ ಪಂದ್ಯ ಗುಜರಾತ ಧೂಳಿಪಟ.ತಮಿಳರ ನಾಗಾಲೋಟ..

ಬೆಳಗಾವಿ   ಕೆಎಸ್‍ಸಿಎ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗುಜರಾತ್ ಮೊದಲ ಇನ್ನಿಂಗ್ಸ್‍ನಲ್ಲಿ 112 ಓವರ್‍ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 307 ರನ್ ಗಳಿಸಿದೆ. ನಂತರ ಬ್ಯಾಟಿಂಗ್‍ಗೆ ಇಳಿದ ತಮಿಳುನಾಡು ತಮಿಳುನಾಡು ದಿನದ ಅಂತ್ಯಕ್ಕೆ 66 ಓವರ್‍ಗಳಲ್ಲಿ 2ಕ್ಕೆ 154 ರನ್ ಗಳಿಸಿದೆ.
ಪಂದ್ಯದ ಮೊದಲ ದಿನ ಏಳು ವಿಕೆಟ್‍ಗೆ 267 ರನ್ ಗಳಿಸಿದ್ದ ಗುಜರಾತ್, ಎರಡನೇ ದಿನ 26 ಓವರ್‍ಗಳಲ್ಲಿ 40 ರನ್ ಗಳಿಸಿದೆ. ನಂತರ ಬ್ಯಾಟಿಂಗ್ ನಡೆಸಿದ ತಮಿಳುನಾಡು ಆರಂಭದಲ್ಲಿ ಸೂರ್ಯಪ್ರಕಾಶ (6) ವಿಕೆಟ್ ಕಳೆದುಕೊಂಡಿತು. ನಂತರ ಅಭಿನವ ಮುಕುಂದ್ ಹಾಗೂ ಕೌಶಿಕ್ ಗಾಂಧಿ ತಾಳ್ಮೆಯ ಆಟ ಪ್ರದರ್ಶಿಸಿ 142 ರನ್‍ಗಳ ಜತೆಯಾಟ ನೀಡಿದರು. ಈ ಮಧ್ಯೆ 99 ರನ್ ಗಳಿಸಿದ್ದ ಅಭಿನವ ಮುಕುಂದ್ ಬೋಲ್ಡ್ ಆಗುವ ಮೂಲಕ ಶತಕ ವಂಚಿತರಾದರು. ಕೌಶಿಕ್ ಗಾಂಧಿ (43), ಇಂಧ್ರಜಿತ್ (0) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಗುಜರಾತ್ ಪರ ರುಶ್ ಕಲಾರಿಯಾ ಎರಡು ವಿಕೆಟ್ ಪಡೆದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *