Breaking News

ರಣಜಿ ಪಂದ್ಯ ಗುಜರಾತ ಧೂಳಿಪಟ.ತಮಿಳರ ನಾಗಾಲೋಟ..

ಬೆಳಗಾವಿ   ಕೆಎಸ್‍ಸಿಎ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗುಜರಾತ್ ಮೊದಲ ಇನ್ನಿಂಗ್ಸ್‍ನಲ್ಲಿ 112 ಓವರ್‍ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 307 ರನ್ ಗಳಿಸಿದೆ. ನಂತರ ಬ್ಯಾಟಿಂಗ್‍ಗೆ ಇಳಿದ ತಮಿಳುನಾಡು ತಮಿಳುನಾಡು ದಿನದ ಅಂತ್ಯಕ್ಕೆ 66 ಓವರ್‍ಗಳಲ್ಲಿ 2ಕ್ಕೆ 154 ರನ್ ಗಳಿಸಿದೆ.
ಪಂದ್ಯದ ಮೊದಲ ದಿನ ಏಳು ವಿಕೆಟ್‍ಗೆ 267 ರನ್ ಗಳಿಸಿದ್ದ ಗುಜರಾತ್, ಎರಡನೇ ದಿನ 26 ಓವರ್‍ಗಳಲ್ಲಿ 40 ರನ್ ಗಳಿಸಿದೆ. ನಂತರ ಬ್ಯಾಟಿಂಗ್ ನಡೆಸಿದ ತಮಿಳುನಾಡು ಆರಂಭದಲ್ಲಿ ಸೂರ್ಯಪ್ರಕಾಶ (6) ವಿಕೆಟ್ ಕಳೆದುಕೊಂಡಿತು. ನಂತರ ಅಭಿನವ ಮುಕುಂದ್ ಹಾಗೂ ಕೌಶಿಕ್ ಗಾಂಧಿ ತಾಳ್ಮೆಯ ಆಟ ಪ್ರದರ್ಶಿಸಿ 142 ರನ್‍ಗಳ ಜತೆಯಾಟ ನೀಡಿದರು. ಈ ಮಧ್ಯೆ 99 ರನ್ ಗಳಿಸಿದ್ದ ಅಭಿನವ ಮುಕುಂದ್ ಬೋಲ್ಡ್ ಆಗುವ ಮೂಲಕ ಶತಕ ವಂಚಿತರಾದರು. ಕೌಶಿಕ್ ಗಾಂಧಿ (43), ಇಂಧ್ರಜಿತ್ (0) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಗುಜರಾತ್ ಪರ ರುಶ್ ಕಲಾರಿಯಾ ಎರಡು ವಿಕೆಟ್ ಪಡೆದರು

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.