Breaking News

MD ಮೋಹಾಲೀನ್ ವರ್ಗಾವಣೆ ಬೆಳಗಾವಿ ಸ್ಮಾರ್ಟಸಿಟಿ ಯೋಜನೆಗೆ ಮತ್ತೆ ಹೊಸ ವಗ್ಗರಣೆ…

ಬೆಳಗಾವಿ- ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯ MD ಮುಲ್ಲಾಲಿ ಮೋಹಾಲೀನ್ ಅವರನ್ನು ರಾಜ್ಯ ಸರ್ಕಾರ  ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ವರ್ಗಾಯಿಸಿದ್ದು ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಗೆ ಮತ್ತೆ ಗ್ರಹಣ ಹಿಡಿದಂತಾಗಿದೆ

ಗುರುವಾರ ರಾಜ್ಯಸರ್ಕಾರ ಎಂಟು ಜನ IAS ಅಧಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು ಮುಲ್ಲಾಲಿ ಮೋಹಾಲೀನ್ ಶಿವಮೊಗ್ಗ ಪಾಲಿಕೆಗೆ ಶಿಪ್ಟ ಆಗಿದ್ದು ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯ MD ಹುದ್ದೆ ಈಗ ಖಾಲಿ ಉಳಿದಂತಾಗಿದೆ

ಗುರುವಾರ ಬೆಳಿಗ್ಗೆ ಸಂಸದ ಸುರೇಶ ಅಂಗಡಿ ಪತ್ರಿಕಾಗೋಷ್ಠಿ ನಡೆಸಿ 20 ದಿನದಲ್ಲಿ ಸ್ಮಾರ್ಟ ಸಿಟಿ ಕೆಲಸ ಶುರು ಆಗುತ್ತೆ ಅಂತ ಘೋಷಿಸಿದ್ದರು ಆದರೆ ಮಧ್ಯಾಹ್ನ ಸರ್ಕಾರ ಸ್ಮಾರ್ಟ ಸಿಟಿ ಅಧಕಾರಿಯನ್ನೇ ಎತ್ತಂಗಡಿ ಮಾಡಿದೆ

ಸ್ಮಾರ್ಟ ಸಿಟಿ ಪಟ್ಟಿಯಲ್ಲಿ ಬೆಳಗಾವಿ ನಗರ ಸೇರಿಕೊಂಡು ವರ್ಷ ಕಳೆದಿದೆ ಅಂದಿನಿಂದ ಒಂದರ ಮೇಲೆ ಇನ್ನೊಂದು ಎನ್ನುವ ರೀತಿಯಲ್ಲಿ ನೂರೆಂಟು ವಿಘ್ನಗಳು ಎದುರಾಗುತ್ತವೆ ಈಗ ಹೊಸ ಅಧಿಕಾರಿ ಬಂದು ಮತ್ತೆ ರಠ ಈಕ ಶುರು ಮಾಡುವಷ್ಟರಲ್ಲಿ ಮತ್ತೆ ಮಳೆಗಾಲ ಶುರು ಆಗಿ ಸ್ಮಾರ್ಟಸಿಟಿ ಕೇವಲ ಕಾಗದದಲ್ಲಿ ಉಳಿಯಬಹುದು ಎನ್ನುವ ಆತಂಕ ಎದುರಾಗಿದೆ

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.