Breaking News

ಯೋಧನ ಶವ ತೆಗೆದುಕೊಂಡು ಹೋಗದ ಸಮಂಧಿಕರು..

ಬೆಳಗಾವಿ- ಕೌಟುಂಬಿಕ ಕಲಹದಿಂದ ಮನನೊಂದು ಮಡದಿಯ ಮನೆಯ ಎದುರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಣಿಕೊಪ್ಪ ಗ್ರಾಮದ ಯೋಧ ಬಸವರಾಜ್ ಹೂಲಿಕವಿ (೩೦) ಇತನ ಶವ ತೆಗೆದುಕೊಂಡು ಹೋಗಿ ಇತನ ಸಮಂಧಿಕರು ಮುಂದೆ ಬರುತ್ತಿಲ್ಲ ಅದ್ಯಾಕೆ ಅಂತೀರಾ ಹಾಗಾದರೆ ಇತನ ಕರಾಳ ಕಥೆ ಓದಿ

ಸೋಮವಾರ ರಾತ್ರಿ ಮಡದಿಯ ತವರು ಮನೆಯ ಎದುರು ವಿಷ ಕುಡಿದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಮಂಗಳವಾರ ಬೆಳಿಗ್ಗೆ ಮೃತಪಡ್ಟಿದ್ದು ಇತನ ಶವ ಇನ್ನುವರೆಗೆ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿಯೇ ಇದೆ

ಆತ್ಮಹತ್ಯೆ ಮಾಡಿಕೊಂಡ ಯೋಧನ ತಂದೆ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದರು ಯೋಧನ ತಂದೆ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ ತಾಯಿ ಮುಸ್ಲೀಂ ಧರ್ಮಕ್ಕೆ ಸೇರಿದವರಾಗಿದ್ದಾರೆ ಮೃತ ಯೋಧನ ಪತ್ನಿ ಮುಸ್ಲೀಂ ಧರ್ಮಕ್ಕೆ ಸೇರಿದವರಾಗಿದ್ದಾರೆ ಆದರೆ ಮೃತ ಯೋಧನ ಹೆಸರು ಬಸವರಾಜ್ ಹೀಗಾಗಿ ಮೃತ ಯೋಧನ ಶವವನ್ನು ಯಾವ ಧರ್ಮದ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ಮಾಡಬೇಕು ಎನ್ನುವ ಗೊಂದಲ ಇವನ ಸಮಂಧಿಕರಲ್ಲಿ ಮೂಡಿದೆ

ಮೃತ ಯೋಧನ ತಂದೆ ಕೆಲ ವರ್ಷಗಳ ಹಿಂದೆ ಮೃತ ಪಟ್ಟಿದ್ದಾರೆ ಈಗ ಇವನ ತಾಯಿ ಮುಸ್ಲೀಮ್ ಪತ್ನಿಯೂ ಮುಸ್ಲೀಂ ಆದರೆ ಈತ ಹಿಂದೂ ಧರ್ಮದನಾಗಿದ್ದು ಬದುಕಿನಲ್ಲಿ ಅನೇಕ ಗೊಂದಲಗಳನ್ನು ಎದುರಿಸಿ ಕೌಟುಂಬಿಕ ಕಲಹದ ವೇದನೆ ಸಹಿಸಲಾಗದೇ ಆತ್ಮಹತ್ಯೆಗೆ ಶರಣಾದ ಬಸವರಾಜ್ ಇಹಲೋಕ ತ್ಯೇಜಿಸಿದ ಮೇಲೆಯೂ ಇತನ ಅಂತ್ಯ ಸಂಸ್ಕಾರದಲ್ಲಿ ಗೊಂದಲ ಮೂಡಿದ್ದು ದುರ್ದೈವದ ಸಂಗತಿಯಾಗಿದೆ

 

 

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *