Home / Breaking News / ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ವಿಷ ಕುಡಿದು ಪ್ರತಿಭಟಿಸಿದ ವ್ಯೆಕ್ತಿಯ ಸಾವು…

ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ವಿಷ ಕುಡಿದು ಪ್ರತಿಭಟಿಸಿದ ವ್ಯೆಕ್ತಿಯ ಸಾವು…

ಬೆಳಗಾವಿ- ಇತ್ತೀಚೆಗೆ ಬೈಲಗೊಂಗಲ ತಾಲ್ಲೂಕಿನ ಹೊಸ ಕುರಗುಂದ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳ ಬಂಧನ ಖಂಡಿಸಿ,ಬೆಳಗಾವಿ ಚನ್ನಮ್ಮ ವೃತ್ತದ ಬಳಿ ವಿಷ ಕುಡಿದು ಪ್ರತಿಭಟಿಸಿದ್ದ ವ್ಯೆಕ್ತಿ ಇಂದು ಮೃತ ಪಟ್ಟ ಘಟನೆ ನಡೆದಿದೆ.

ಆರೋಪಿಗಳನ್ನು ಬಂಧಿಸಬೇಡಿ,ನಮಗೆ ನ್ಯಾಯ ಕೊಡಿ ಎಂದು ವ್ಯಕ್ತಿ ವಿಷ ಕುಡಿದಿದ್ದ ವ್ಯೆಕ್ತಿ ಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು,
ಚಿಕಿತ್ಸೆ ಫಲಿಸದೇ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಸಾವನ್ನೊಪ್ಪಿದ್ದಾನೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸಕುರಗುಂದ ಗ್ರಾಮದ ಸಂಜು ನಾಯ್ಕರ್ ಮೃತ ದುರ್ದೈವಿಯಾಗಿದ್ದಾನೆ.

ಎರಡು ದಿನಗಳ ಹಿಂದೆ ಕೊಲೆ ಪ್ರಕರಣದಡಿ ಮೃತ ಸಂಜು ಕುಟುಂಬಸ್ಥರು.ಜೈಲು ಸೇರಿದ್ದರು.
ಹೆಂಡತಿ ಜತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಯುವಕನ ಹತ್ಯೆ ಮಾಡಿದ್ದ ಮೃತ ಸಂಜುನ ಅಣ್ಣ ಮತ್ತು ಕುಟುಂಬಸ್ಥರು. ಕೊಲೆ ಮಾಡಿದ್ದ ಅಣ್ಣ ಈರಪ್ಪ ಜತೆಗೆ ಕುಟುಂಬ ಸದಸ್ಯರನ್ನು ಬೈಲಹೊಂಗಲ ಪೊಲೀಸರು‌ ಬಂಧಿಸಿದ್ದರು,
ಪೊಲೀಸರು ಅನ್ಯಾಯ ಮಾಡುತ್ತಿದ್ದಾರೆ ಎಂದು ವಿಷ ಸೇವಿಸಿ ನಿನ್ನೆ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದ ಸಂಜು ನಾಯ್ಕರ್. ವಿಷಸೇವಿಸಿದ್ದ ತಕ್ಷಣ ಸಂಜುನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಸಂಜು ನಾಯ್ಕರ್.
ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದು,ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದಣ ಮುಗಿಲು ಮುಟ್ಟಿದೆ.

 

 

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *