Breaking News
Home / Breaking News / ಕೈದಿಗಳಿಗೂ ಮತದಾನ ಮಾಡಲು ಚಾನ್ಸ ಕೊಡಿ….ಚನ್ನಮ್ಮ ವೃತ್ತದಲ್ಲಿ ಏಕಾಂಗಿ ಹೋರಾಟ…!!

ಕೈದಿಗಳಿಗೂ ಮತದಾನ ಮಾಡಲು ಚಾನ್ಸ ಕೊಡಿ….ಚನ್ನಮ್ಮ ವೃತ್ತದಲ್ಲಿ ಏಕಾಂಗಿ ಹೋರಾಟ…!!

ಬೆಳಗಾವಿ- ಜೈಲಿನಲ್ಲಿರುವ ವಿಚಾರಾಧೀನ ಮತ್ತು ಶಿಕ್ಷೆಗೆ ಒಳಗಾಗಿರುವ ಕೈದಿಗಳಿಗೂ ಮತದಾನ ಮಾಡಲು ಅವಕಾಶ ನೀಡಬೇಕೆಂದು ಸಮಾಜ ಸೇವಕನೊಬ್ಬ ಫಲಕ ಬರೆದುಕೊಂಡು ಚನ್ನಮ್ಮ ವೃತ್ತದಲ್ಲಿ ಏಕಾಂಗಿ ಹೋರಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾನೆ .

ಬೈಲಹೊಂಗಲ ಮೂಲದ ವ್ಹಿಜಿ ಬಾಳೆಕುಂದ್ರಿ ಎಂಬ ಸಮಾಜಸೇವಕ ಸುಡು ಬಿಸಿಲಲ್ಲಿ ಟೋಪಿ ಹಾಕಿಕೊಂಡು ಕರಿ ಹಲಗೆಯ ಮೇಲೆ ದೇಶ ವಿದೇಶದಲ್ಲಿರುವ ಕೈದಿಗಳಿಗೂ ಮತದಾನ ಮಾಡಲು ಅವಕಾಶ ಕೊಡಿ ಎಂದು ಬರೆದು ಪ್ರೋಟೆಸ್ಟ ಮಾಡುತ್ತಿರುವದು ವಿಶೇಷ

ಜೈಲಿನಲ್ಲಿರುವ ಕೈದಿಗಳಿಗೂ ಮತದಾನದ ಹಕ್ಕಿದೆ ಅವರು ಮತದಾನದಿಂದ ವಂಚಿತರಾಗಬಾರದು ಅವರಿಗೂ ಪೋಸ್ಟ ಬಾಯಲೆಟ್ ಮೂಲಕ ಮತದಾನ ಮಾಡಲು ಅವಕಾಶ ನೀಡಬೇಕು ಚುನಾವಣಾ ಆಯೋಗ ಈ ಕುರಿತು ತಕ್ಷಣ ಆದೇಶ ಹೊರಡಿಸಬೇಕು ಎಂದು ವ್ಹಿಜಿ ಬಾಳೆಕುಂದ್ರಿ ಒತ್ತಾಯಿಸಿದ್ದಾರೆ

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *