Breaking News

ಉದ್ಧವ ಠಾಖ್ರೇ ನಿಂದೇನ್ ಐತಿ….ಮುಂಬಯಿ ನಮ್ದ ಐತಿ….!!!

ಬೆಳಗಾವಿ- ಗಡಿ ಬೆಳಗಾವಿಯಲ್ಲಿ ಕನ್ನಡದ ಹುಡುಗ್ರು ಈಗ ಹೊಸ ಘೋಷಣೆ ಹಾಕುತ್ತಿದ್ದಾರೆ.ಅದೇಂದ್ರೆ,ಯಾರಪ್ಪಂದ್ ಏನ್ ಐತಿ,ಮುಂಬಯಿ ನಮ್ದ ಐತಿ..ಉದ್ಧವ ಠಾಖ್ರೇದ ಏನ್ ಐತಿ,ಮುಂಬಯಿ ನಮ್ದ ಐತಿ ಎನ್ನುವ ಘೋಷಣೆಗಳು ಈಗ ಬೆಳಗಾವಿಯಲ್ಲಿ ಮೊಳಗುತ್ತಿವೆ.

ಕರುನಾಡ ಯುವ ಸೇನೆ ಕಾರ್ಯಕರ್ತರು ಇಂದು ಬೆಳಗಾವಿಯ ಚನ್ನಮ್ಮ ಸರ್ಕಲ್‌ ನಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯೆಕ್ತ ಪಡಿಸಿದರು,ಮುಂಬಯಿ- ಕರ್ನಾಟಕ ಪ್ರದೇಶವನ್ನು ಕನ್ನಡದ ರಾಜರೇ ಆಳಿದ್ದಾರೆ.ಮುಂಬಯಿ ಕೂಡಾ ಕರ್ನಾಟಕ ರಾಜ್ಯಕ್ಕೆ ಸೇರಬೇಕು ಎಂದು ಕನ್ನಡದ ಹುಡುಗರು ಬೆಳಗಾವಿಯಲ್ಲಿ ಹೊಸ ಅವಾಜ್ ಹಾಕಿದ್ರು

ಡಿಸಿಎಂ ಸವದಿ ಅವರು ಮುಂಬಯಿ ಕರ್ನಾಟಕ ರಾಜ್ಯಕ್ಕೆ ಸೇರಬೇಕು ಎಂದು ಒತ್ತಾಯಿಸಿದ್ದು ಅತ್ಯಂತ ಸೂಕ್ತವಾಗಿದೆ.ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ ಎಷ್ಟೇ ಧುಮಡಿ ಮಾಡಿದ್ರೂ ಬೆಳಗಾವಿಯ ಒಂದಿಂಚು ಜಾಗ ಮಹಾರಾಷ್ಟ್ರಕ್ಕೆ ಸೇರುವದು ಈ ಜನ್ಮದಲ್ಲಿ ಸಾಧ್ಯವೇ ಇಲ್ಲ,ಉದ್ಧವ ಠಾಖ್ರೆ ಬೆಳಗಾವಿಯನ್ನು ಮಹಾರಾಷ್ಟ್ರ ಕ್ಕೆ ಸೇರಿಸುವ ಹಗಲು ಕನಸು ಕಾಣುತ್ತಿದ್ದಾರೆ ಎಂದು ಕರುನಾಡ ಯುವ ಸೇನೆಯ ಕಾರ್ಯಕರ್ತರು ಲೇವಡಿ ಮಾಡಿದ್ರು…

Check Also

ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ …

Leave a Reply

Your email address will not be published. Required fields are marked *