ಗಡಿ ದಾಟಿದ, ಸತೀಶ್ ಸಾಹುಕಾರ್ ಸೋಶಿಯಲ್ ಸರ್ವಿಸ್……!!!

ಬೆಳಗಾವಿ- ಜಾರಕಿಹೊಳಿ ಸಹೋದರರಲ್ಲಿ ಸತೀಶ್ ಸಾಹುಕಾರ್ ಗೆ ಬಡವರ ಮೇಲೆ ಅತೀವ ಪ್ರೀತಿ,ಅವರು ದುಂದು ವೆಚ್ಚ ಮಾಡುವದೇ ಇಲ್ಲ,ಹತ್ತು ಹಲವಾರು ಬಾರಿ ಯೋಚಿಸಿ,ಪರಶೀಲಿಸಿ,ಎಲ್ಲಿ ಎನು ಮಾಡಬೇಕೋ ಅದನ್ನು ಮಾಡಿಯೇ ಬಿಡುತ್ತಾರೆ.

ಯಮಕನಮರಡಿ ಕ್ಷೇತ್ರದಲ್ಲಿ ಬರುವ ಚಿಕ್ಕಾಲಗುಡ್ಡ ಗ್ರಾಮದ ಹಿರಿಯರು ಸತೀಶ್ ಸಾಹುಕಾರ್ ಅವರನ್ನು ಭೇಟಿಯಾಗಿ ,ಗೋವಾದ ಪಣಜಿಗೆ ಹೋದ ಚಿಕ್ಕಾಲಗುಡ್ಡ ಗ್ರಾಮದ ಕೆಲವು ಜನ ಸಂಕಷ್ಟದಲ್ಲಿದ್ದಾರೆ ಅವರಿಗೆ ಸಹಾಯ ಮಾಡಬೇಕು ಎಂದು ಕೇಳಿಕೊಂಡಾಗ,ಅದಕ್ಕೆ ತಕ್ಷಣ ಸ್ಪಂದಿಸಿದ ಸತೀಶ್ ಗೋವಾದಲ್ಲಿರುವ ತಮ್ಮ ಅಭಿಮಾನಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪಣಜಿಯಲ್ಲಿ ಸಂಕಷ್ಟ ಎದುರಿಸುತ್ತಿರುವ ಚಿಕ್ಕಾಲಗುಡ್ಡ ಗ್ರಾಮದವರನ್ನು ಭೇಟಿಯಾಗಿ ಅವರ ಸಮಸ್ಯೆ ಆಲಿಸುವಂತೆ ಸೂಚಿಸಿದರು.

ಗೋವಾದಲ್ಲಿಯೇ ದಿನಸಿ ವಸ್ತುಗಳನ್ನು ಖರೀಧಿಸಿ ಸಂಕಷ್ಟದಲ್ಲಿರುವ ಎಲ್ಲ ಕನ್ನಡಿಗರಿಗೆ ವಿತರಿಸುವಂತೆ ಸೂಚನೆ ನೀಡಿದರು
ಕೆಲವೇ ಗಂಟೆಗಳಲ್ಲಿ ಸತೀಶ್ ಸಾಹುಕಾರ್ ಆಜ್ಞೆ ಪಾಲಿಸಿದ ಅವರ ಅಭಿಮಾನಿಗಳು ಆಹಾರ ಸಾಮುಗ್ರಿಗಳನ್ನು ವಿತರಿಸಿದ ಪೋಟೋಗಳನ್ನು ಸತೀಶ್ ಸಾಹುಕಾರ್ ಗೆ ಫಾರ್ವರ್ಡ್ ಮಾಡಿದ್ರು

ಕೆಪಿಸಿಸಿ ಕಾರ್ಯಾದ್ಯಕ್ಷರಾಗಿರುವ ಸತೀಶ ಸಾಹುಕಾರ್ ಅವರ ಸೋಶಿಯಲ್ ಸರ್ವಿಸ್ ಕರ್ನಾಟಕದ ಗಡಿ ದಾಟಿ ಸಂಕಷ್ಟದಲ್ಲಿರುವ ಹೊರನಾಡ ಕನ್ನಡಿಗರಿಗೆ ಸಂತೃಪ್ತಿ ನೀಡಿದೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *