Breaking News

ಚಳಿ ಬಿಡಿಸಲು ಬೆಂಕಿ ಗೆ ಕೈ ಮಾಡಿದ ಅಜ್ಜ ಕೈಲಾಸ ಸೇರಿದ

ಬೆಳಗಾವಿ- ನಿನ್ನೆ ರಾತ್ರಿ ಇಡೀ ಬೆಳಗಾವಿ ನಗರ ಹೊಸ ವರ್ಷದ ಸಂಬ್ರಮದಲ್ಲಿ ಮಿಂದೆದ್ದು ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸುತ್ತಿರುವಾಗ ರೊಟ್ಟಿ ಗಂಟು ಕಟ್ಟಿಕೊಂಡು ಪ್ಯಾಕ್ಟರಿ ಕಾಯಲು ಬಂದ ಅಜ್ಜನೊಬ್ಬ ಚಳಿ ತಾಳಲಾರದೇ ಬೆಂಕಿ ಹಚ್ವಿ ಅದೇ ಬೆಂಕಿಯ ಜ್ವಾಲೆಗೆ ಆಹುತಿಯಾಗಿ ಬೆಳಿಗ್ಗೆ ಬೀದಿ ನಾಯಿಗಳಿಗೆ ಆಹಾರವಾದ ಹೃದಯ ವಿದ್ರಾವಕ ಘಟನೆ ಬೆಳಗಾವಿಯ ಉದ್ಯಮಭಾಗ ಪ್ರದೇಶದಲ್ಲಿ ನಡೆದಿದೆ

ಬೆಳಗಾವಿ ಅನಿಗೋಳ ಪ್ರದೇಶದ ನಿವಾಸಿ 61 ವರ್ಷದ ಪ್ರಭಾಕರ ಕುಕಲೇಕರ ಎಂಬಾತ ಉದ್ಯಮಭಾಗ ಪ್ರದೇಶದಲ್ಲಿರುವ ಬೆಮ್ಕೋ ಫ್ಯಾಕ್ಟರಿ ಹಿಂದುಗಡೆ ಫ್ಯಾಕ್ಟರಿ ಯಲ್ಲಿ ವಾಚ್ ಮನ್ನಾಗಿ ಕೆಲಸ ಮಾಡುತ್ತಿದ್ದ ಎಂದಿನಂತೆ ನಿನ್ನೆ ರಾತ್ರಿ ರೊಟ್ಟಿ ಗಂಟು ಕಟ್ಕೊಂಡು ಮಾಲೀಕನ ಆಸ್ತಿ ಕಾಯಲು ಬಂದಿದ್ದ ಆತನ ನೆರೆಹೊರೆಯ ವಾಚ್ ಮನ್ ಗಳು ಹೊಸ ವರ್ಷದ ಪಾರ್ಟಿ ಮಾಡಲು ಹೋಗಿದ್ದರು ಏಕಾಂಗಿ ಯಾದ ಅಜ್ಜ ಚಳಿಯ ಹೊಡೆತ ತಾಳಲಾರದೇ ಎಂದಿನಂತೆ ಬೆಂಕಿ ಹಚ್ಚಿದ ಅದೇ ಬೆಂಕಿಯಲ್ಲಿ ಕಾಯಿಸಿ ಕೊಳ್ಳುತ್ತಿರುವಾಗ ಅದೇ ಬೆಂಕಿಯಲ್ಲಿ ಆಯತಪ್ಪಿ ಬಿದ್ದು ಬೆಂಕಿಯ ಜ್ವಾಲೆಯಲ್ಲಿ ಬೆಂದು ಹೋಗಿದ್ದಾನೆ

ಇಡೀ ಬೆಳಗಾವಿ ನಗರ ನ್ಯು ಇಯರ್ ಪಾರ್ಟಿಯಲ್ಲಿ ಇರುವಾಗ ಅಸಹಾಯಕ ಅಜ್ಜ ಚಳಿ ತಾಳಲಾರದೇ ಬೆಂಕಿ ಹಚ್ಚಿ ಅದೇ ಬೆಂಕಿಯಲ್ಲಿ ಬೆಂದು ಬೆಳಗಿನ ಜಾವ ಬೀದಿ ನಾಯಿಗಳಿಗೆ ಆಹಾರವಾದ ಘಟನೆ ನಡೆದಿದೆ
ಉದ್ಯಮಭಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *